28.5 C
ಮಂಗಳೂರು
September 4, 2026
Uncategorizedರಾಜ್ಯ/ದೇಶವಾಣಿಜ್ಯ

ವಲ್ಸಾಡ್–ವೇಲಂಕಣಿ ನಡುವೆ ವಿಶೇಷ ರೈಲು ಸಂಚಾರ ಆರಂಭ;

ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಮುಂಬೈ, ಜು. 01: ಪ್ರಯಾಣಿಕರ ಬೇಡಿಕೆಯನ್ನು ಮನಗಂಡ ಪಶ್ಚಿಮ ರೈಲ್ವೆಯು ವಲ್ಸಾಡ್–ವೇಲಂಕಣಿ ವಿಶೇಷ ರೈಲು ಸಂಚಾರ ಆರಂಭಿಸಿದೆ. ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ವಿಶೇಷ ರೈಲುಗಳನ್ನು “Train on Demand” ಸೇವೆಯಡಿ ಎರಡು ಟ್ರಿಪ್‌ಗಳಲ್ಲಿ ಓಡಿಸಲಾಗುತ್ತಿದೆ.

ಗುಜರಾತಿನ ವಲ್ಸಾಡ್ ಹಾಗೂ ತಮಿಳುನಾಡಿನ ಪ್ರಸಿದ್ಧ ತೀರ್ಥಕ್ಷೇತ್ರ ವೇಲಂಕಣಿ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ.ರೈಲು ಸಂಖ್ಯೆ 09030 (ವಲ್ಸಾಡ್–ವೇಲಂಕಣಿ ವಿಶೇಷ ರೈಲು):03-07-2026 (ಶುಕ್ರವಾರ) ಸಂಜೆ 6:25ಕ್ಕೆ ವಲ್ಸಾಡ್‌ನಿಂದ ಹೊರಡಲಿದೆ.04-07-2026 (ಶನಿವಾರ) ಬೆಳಿಗ್ಗೆ 10:00ಕ್ಕೆ ವೇಲಂಕಣಿ ತಲುಪಲಿದೆ.ರೈಲು ಸಂಖ್ಯೆ 09029 (ವೇಲಂಕಣಿ–ದಹಾನು ರೋಡ್ ವಿಶೇಷ ರೈಲು):06-07-2026 (ಸೋಮವಾರ ಮಧ್ಯರಾತ್ರಿ 12:30ಕ್ಕೆ) ವೇಲಂಕಣಿಯಿಂದ ಹೊರಡಲಿದೆ.

07-07-2026 ಬೆಳಿಗ್ಗೆ 10:30ಕ್ಕೆ ದಹಾನು ರೋಡ್ ತಲುಪಲಿದೆ.ಈ ರೈಲಿನಲ್ಲಿ ಒಟ್ಟು 22 ಬೋಗಿಗಳಿದ್ದು, ಅವುಗಳಲ್ಲಿ:20 ಸ್ಲೀಪರ್ ಕ್ಲಾಸ್ (ಎಸ್‌ಸಿಎನ್) ಬೋಗಿಗಳು2 ಎಸ್‌ಎಲ್‌ಆರ್/ಡಿ ಬೋಗಿಗಳುಈ ರೈಲು ದಹಾನು ರೋಡ್, ಪಾಲ್ಘರ್, ವಸಾಯಿ ರೋಡ್, ಪನ್ವೇಲ್, ಲೋಣಾವಾಲಾ, ಪುಣೆ, ದೌಂಡ್, ಸೊಲ್ಲಾಪುರ, ಕಲಬುರಗಿ, ವಾಡಿ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂಟಕಲ್, ತಾಡಿಪತ್ರಿ, ಯೆರಗుంట್ಲ, ಕಡಪ, ರೇಣಿಗುಂಟ, ಕಾಟ್ಪಾಡಿ, ವೇಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ಚಿದಂಬರಂ, ಮಯಿಲಾಡುತುರೈ, ತಿರುವಾರೂರು, ಕಾರೈಕಲ್, ನಾಗೂರು ಹಾಗೂ ನಾಗಪಟ್ಟಣಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ (Reservation) ಹಾಗೂ ಹೆಚ್ಚಿನ ಮಾಹಿತಿಗಾಗಿ IRCTC/NTES ವ್ಯವಸ್ಥೆ ಅಥವಾ ಸಮೀಪದ ರೈಲ್ವೆ ವಿಚಾರಣಾ ಕೇಂದ್ರವನ್ನು ಸಂಪರ್ಕಿಸಬಹುದು.

Related posts

ಸಚಿವ ರಿಜ್ವಾನ್ ಅರ್ಷದ್ದೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ಸಿಂದ ಆತ್ಮೀಯ ಸ್ವಾಗತ : ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಹೆಜಮಾಡಿ ಟೋಲ್ಲೇಟ್ ಬಳಿ ಆತ್ಮೀಯ ಸ್ವಾಗತ ;

Voiceoftulunadu

ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ:ಅಧ್ಯಕ್ಷತೆ ವಹಿಸಿದ ಜನಜಾಗೃತಿ ಸಮಿತಿ :ಉಪಾಧ್ಯಕ್ಷೆ ಬಬಿತಾ ಜಗದೀಶ್ ಅರಸ್ ;

Voiceoftulunadu

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಮಾನ ಮನಸ್ಕ ತಂಡ ಉಡುಪಿ ಸಹಯೋಗದ ಕಾರ್ಯಕ್ರಮ;

Voiceoftulunadu

Leave a Comment