28.5 C
ಮಂಗಳೂರು
September 4, 2026
ಆರೋಗ್ಯಕಲೆ/ಸಾಹಿತ್ಯಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ಸಿನಿಮಾ

ತೀರ್ಥಹಳ್ಳಿ ಮೂಲದ ಬರಹಗಾರರಾದ ಜಿ ಟಿ ನಂದೀಶ್ ಹೃದಯಾಘಾತದಿಂದ ನಿಧನ:

ತೀರ್ಥಹಳ್ಳಿ: ಚಲನಚಿತ್ರ ಕಥೆಗಾರ ಹಾಗೂ ಬರಹಗಾರರಾದ ಜಿ ಟಿ ನಂದೀಶ್ (37 ವರ್ಷ) ನಿನ್ನೆ ಹೃದಯಾಘಾತದಿಂದ ನಿಧನರಾದರು.

ತೀರ್ಥಹಳ್ಳಿಯ ಮಾಲೂರು ಮೂಲದವರಾದ ನಂದೀಶ್,ಕನ್ನಡದ ಹಲವು ಸಿನಿಮಾ ಹಾಗೂ ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಪಾರು ಧಾರಾವಾಹಿ ಸೇರಿದಂತೆ ಇನ್ನೂ ಹಲವು ಸೀರಿಯಲ್ ಗಳಿಗೆ ಕಥೆಯನ್ನು ಬರೆದಿದ್ದರು. ನಿನ್ನೆ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಗ್ಯಾಸ್ಟ್ರಿಕ್ ಎಂದು ನೋವನ್ನು ನಿರ್ಲಕ್ಷ್ಯ ಮಾಡಿದ್ದು, ಆದರೆ ವಿಧಿ ಅವರ ಬದುಕನ್ನೇ ಕೊನೆಗಾಣಿಸಿತ್ತು.

ನಂದೀಶ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಹಲವು ಬಂಧು ಬಾಂಧವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ನಂದೀಶ್ ನಿಧನಕ್ಕೆ ಹಲವು ನಟ ನಟಿಯರು , ನಿರ್ದೇಶಕರು, ಬರಹಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಪರಿಮಳದ ಬಾಕಿ ಮೊತ್ತ ಕೃತಿಗೆ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ 2026 : ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ಕವನ ಸಂಕಲನ;

Voiceoftulunadu

ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನಘಟ್ಟ ಲೋಕಾರ್ಪಣೆ: ಸ್ವರ್ಣೆಗೆ ಬಾಗಿನ ಸಮರ್ಪಣೆ ;

Voiceoftulunadu

ಉಡುಪಿ ತಾ. ಮಟ್ಟದ ಚದುರಂಗ ಪಂದ್ಯಾವಳಿ ಕು. ನಿಹಾರಿಕಾ ಜಿಲ್ಲಾಮಟ್ಟಕ್ಕೆ ಆಯ್ಕೆ ಉಡುಪಿ ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ನಿಹಾರಿಕಾ ;

Voiceoftulunadu

Leave a Comment