ವರದಿ /ಚಿತ್ರ: ಈ ಮೀಡಿಯಾ
ಬಂಟಕಲ್: ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿದ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇದರ ಪದಾಧಿಕಾರಿಗಳು, ಸದಸ್ಯರು ಶಾಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ತಮ್ಮ ಕ್ಲಬ್ಬಿನ ವತಿಯಿಂದ ಸುಮಾರು ರೂ 25000 ಮೌಲ್ಯದ ತರಕಾರಿ, ಜೀನಸು ಸಾಮಗ್ರಿಗಳನ್ನು ಶಾಲಾ ಸಂಚಾಲಕ ರಾಮದಾಸ ಪ್ರಭು ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಸಂಗೀತ ಪಾಟ್ಕರ್ ರವರಿಗೆ ಹಸ್ತಾಂತರಿಸಿದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮವಾದ ಹಸಿದವರಿಗೆ ಹಸಿವು ಇಂಗಿಸುವ ಕಾರ್ಯಕ್ರಮದಡಿಶತಮಾನೋತ್ಸವ ಕಂಡ ಬಂಟಕಲ್ಲು ಶಾಲೆಗೆ ಈ ಕೊಡುಗೆಯನ್ನು ನೀಡಲಾಗಿದೆ.ಲಯನ್ಸ್ ಸಂಸ್ಥೆಯ ಪೂರ್ವ ಅಧ್ಯಕ್ಷೆ ಲ. ಅನಿತಾ ಮೆಂಡೋನ್ಸಾ ರವರು ಯೋಜನೆಯ ಬಗ್ಗೆ ಮಾತನಾಡಿ, ಈ ಶಾಲೆಗೆ ನಾವು ನೀಡಿದ ಸಹಕಾರವನ್ನು ಉಲ್ಲೇಖಿಸಿ ಇನ್ನು ಮುಂದೆಯೂ ನಮ್ಮ ಲಯನ್ಸ್ ಸಂಸ್ಥೆಯು ಈ ಶಾಲೆಯ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಸಹಕಾರವನ್ನು ನೀಡಲಿದೆ ಎಂದು ತಿಳಿಸಿ, ಈ ಶಾಲೆಯ ಬೆಳವಣಿಗೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಶಾಲಾ ಸಂಚಾಲಕ ರಾಮದಾಸ ಪ್ರಭು ಅವರು ಲಯನ್ಸ್ ಸಂಸ್ಥೆಯ ಈ ಕೊಡುಗೆ ಗೆ ಕೃತಜ್ಞತೆ ಸಲ್ಲಿಸಿದರು.ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ಇದರ ಅಧ್ಯಕ್ಷೆ e. ಸಿಂಥಿಯಾ ಡಿ’ಸೋಜರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಮೇರಿ ಡಿಸೋಜಾ, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಲಯನ್ಸ್ ಸದಸ್ಯರು, ಶಾಲಾ ಗೌರವ ಶಿಕ್ಷಕಿಯರು, ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಪಾಯಸ ಊಟವನ್ನು ಲಯನ್ಸ್ ಸದಸ್ಯರು ಬಡಿಸಿ ಮಕ್ಕಳೊಂದಿಗೆ ಸಹಭೋಜನ ಮಾಡಿದರು.ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಮರಾಯ ಪಾಟ್ಕರ್ ರವರು ಕಾರ್ಯಕ್ರಮ ನಿರೂಪಿಸಿ ವಂದಿದಿದರು.
