ವರದಿ/ ಚಿತ್ರ :ಈ ಮೀಡಿಯಾ
ಕಲ್ಯಾಣಪುರ: ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಡಾ. ಟಿ ಎಮ್ ಎ ಪೈ ಇದರ ಇಂಟರಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವ ತಯಾರಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ವಿಶೇಷ ಉಪನ್ಯಾಸ ಕಾರ್ಯಕ್ರಮ : ರೋಟರಿ ಕ್ಲಬ್ ಸದಸ್ಯರಾದ ರೋಟೇರಿಯನ್ ವಿನಯ ಕುಮಾರ್ ಕಬ್ಬಾಡಿ ಅವರು “ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾತುಗಳನ್ನಾಡಿ, “ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕ್ಲಬ್ ಅಧ್ಯಕ್ಷರಾದ ರೋ ಗಿರೀಶ್ ಚಂದ್ರ ಆರ್., ಸದಸ್ಯರಾದ ರೋ. ದಿವಾಕರ್ ಪಿ., ರೊ. ಇಟ್ಬಾಲ್ ಹಮ್ಮಾಜಿ, ರೋ. ರಾಮ ಪೂಜಾರಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
