September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯರಾಜ್ಯ/ದೇಶಸಾಮಾಜಿಕ/ಇತಿಹಾಸ

ಇಂದು ಶಿಕ್ಷಕರ ದಿನಾಚರಣೆಯ ಸಂಭ್ರಮ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ..;

ಇಂದು ಸೆ. 5 ಶಿಕ್ಷಕರ ದಿನಾಚರಣೆಯ ಸಂಭ್ರಮ,ಶಿಕ್ಷಣವೆಂದರೆ ಕೇವಲ ಪುಸ್ತಕದ ಪಾಠ ಹಾಗೂ ಅಂಕ ಗಳಿಕೆಯಾಗದೆ ವಿದ್ಯಾರ್ಥಿಯು ತನ್ನ ವ್ಯಕ್ತಿತ್ವ ರೂಪಿಸಿ ಸಾಧನೆಯ ಹಾದಿಯ ಕಡೆಗೆ ಸಾಗಬೇಕಾದ ಮಹತ್ತರ ಜವಾಬ್ದಾರಿಯಲ್ಲಿ ಶಿಕ್ಷಕರ ಪಾತ್ರವೇ ಹಿರಿದು, ಶಿಕ್ಷಕರೆಂದರೆ ಕೇವಲ ಪಾಠ ಹೇಳುವವರಲ್ಲ; ಬದುಕಿನ ದಾರಿ ತೋರಿಸುವವರು.“ಗುರು” ಎಂಬುದು ಎರಡಕ್ಷರದ ಪದವಾದರೂ ಅದು ವಿಶಾಲವಾದ ಅರ್ಥವನ್ನು ಹೊಂದಿದೆ . ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು.

ವಿದ್ಯಾರ್ಥಿಯ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಗುರುವಿನ ಮಾರ್ಗದರ್ಶನ ಮತ್ತು ಶರಣಾಗತಿಯಿಲ್ಲದೆ ಮೋಕ್ಷ (ಮುಕ್ತಿ) ದೊರೆಯುವುದಿಲ್ಲ ಎಂಬುದನ್ನು ದಾಸ ಶ್ರೇಷ್ಠ ಪುರಂದದಾಸರ ಕೀರ್ತನೆ ತಿಳಿಸುತ್ತದೆ ಅಂದರೆ ಅಂಧವಾಗಿ ಯಾರನ್ನಾದರೂ ಅನುಸರಿಸುವುದಲ್ಲ. ತನ್ನ ಅಹಂಕಾರವನ್ನು ಬದಿಗಿಟ್ಟು ಜ್ಞಾನಕ್ಕೆ ಶರಣಾಗುವುದು ಇದರ ನಿಜವಾದ ಅರ್ಥ.

ಒಳ್ಳೆಯ ಶಿಕ್ಷಕ ಪಾಠಪುಸ್ತಕದ ಜ್ಞಾನವನ್ನಷ್ಟೇ ನೀಡುವುದಿಲ್ಲ. ಶಿಸ್ತು, ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ ಕಲಿಸುತ್ತಾನೆ. ವಿದ್ಯಾರ್ಥಿಯ ಸೋಲಿನಲ್ಲಿ ಧೈರ್ಯ ತುಂಬಿ, ಗೆಲುವಿನಲ್ಲಿ ವಿನಯದಿಂದ ಇರಲು ಕಲಿಸುವವನೇ ನಿಜವಾದ ಗುರು.ನಾವು ಎಷ್ಟೇ ವಿದ್ಯಾವಂತರಾದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮ ಬದುಕಿನಲ್ಲಿ ಒಬ್ಬ ಶಿಕ್ಷಕರ ಛಾಪು ಇದ್ದೇ ಇರುತ್ತದೆ.

ನಾವು ಮೊದಲ ಅಕ್ಷರ ಕಲಿತ ಕ್ಷಣದಿಂದ ಜೀವನದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳು ವವರೆಗೂ ಯಾವುದೋ ಒಂದು ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನ ನಮಗೆ ದಿಕ್ಕು ತೋರಿಸಿರುತ್ತದೆ.ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನ.ಇಂದು ತಂತ್ರಜ್ಞಾನದ ಯುಗ ಗುರುವಿನ ಜವಾಬ್ದಾರಿ

Related posts

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ, ಎರ್ಮಾಳು ಕಿಶೋರ್ ಪೂಜಾರಿ ಮತ್ತು ಕುತ್ಯಾರು ನಿವಾಸಿ ಸದಾನಂದ ದೇವಾಡಿಗ ಬಂಧಿತರು: ಕನ್ನಡಕಿಶೋ‌ರ್ ಪೂಜಾರಿಸದಾನಂದ ದೇವಾಡಿಗ ;

Voiceoftulunadu

ತುಳುನಾಡಿನ ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆ: ಮೆಟ್ರೋ ಮಾದರಿಯಲ್ಲಿ ಕಂಗೊಳಿಸುತ್ತಿದೆ ಬಂಟ್ವಾಳ ಸ್ಟೇಷನ್: ಪ್ರಧಾನಿ ಮೋದಿಯವರಿಂದ ಚಾಲನೆ ;

Voiceoftulunadu

ಮೂಡುಬೆಳ್ಳೆ : ಕೆನರಾ ಬ್ಯಾಂಕ್ CSR ಯೋಜನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಉದ್ಘಾಟನೆ ಮೂಡುಬೆಳ್ಳೆಯ ಲಯನ್ಸ್ ಸೇವಾ ಭವನದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ವ್ಯವಸ್ಥೆ;

Voiceoftulunadu

Leave a Comment