ವರದಿ /ಚಿತ್ರ: ಈ ಮೀಡಿಯಾ
ಪಡುಬಿದ್ರಿ : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಎರ್ಮಾಳು ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷೆ, ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಎರ್ಮಾಳು ಶೀಲಾ ಕೆ. ಅವರು ಚೆನ್ನೆಮಣೆ ಆಟದ ಮೂಲಕ ಉದ್ಘಾಟಿಸಿದರು.
ಆಯುರ್ವೇದ ವೈದ್ಯರಾದ ಡಾ. ಅನ್ಲಾ ಕೆ. ಶೆಟ್ಟಿ ಅವರು ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದು, ಆಟಿಡೊಂಜಿ ದಿನದ ಮಹತ್ವದ ಬಗ್ಗೆ ತಿಳಿಸಿದರು.
ಕಾಪು ಸ್ತ್ರೀ ಶಕ್ತಿ ಸಂಘದ ಹಾಗೂ ಬ್ಯಾಂಕ್ ನಕಾರ್ಯನಿರ್ವಹಣಾಧಿಕಾರಿ ಸಾವಿತ್ರಿ ಗಣೇಶ್ ಅವರು ಆರೋಗ್ಯದಾಯಕ ಆಟಿಯ ತಿನಿಸುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷರಾದ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶಕುಂತಳಾ ಕೋಟ್ಯಾನ್ ಪರಿಚಯಿಸಿದರು. ಕೋಶಾಧಿಕಾರಿ ವಿಮಲಾ ಕೆ. ಸಾಲ್ಯಾನ್ ವಂದಿಸಿದರು.
