September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಫ್ಯಾಷನ್/ಬ್ಯೂಟಿ ಝೋನ್ರಾಜ್ಯ/ದೇಶವಾಣಿಜ್ಯ/ಉದ್ಯಮವಿಶೇಷ ಅಂಕಣ

ಬೆವರಿನ ಹನಿಗಳಿಂದ ಹೊಳೆಯುವ ಕಿರೀಟ: ಉಡುಪಿಯ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿಯ ಕಣ್ಣೀರ ಹಾದಿಯ ವಿಜಯಗಾಥೆ;

ಲೇಖನ / ಚಿತ್ರ :ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

ಬದುಕು ಎಲ್ಲರಿಗೂ ರತ್ನಗಂಬಳಿ ಹಾಸುವುದಿಲ್ಲ. ಕೆಲವರ ಪಾಲಿಗೆ ಅದು ಕಲ್ಲು-ಮುಳ್ಳುಗಳ ಹಾದಿ, ತಣ್ಣನೆಯ ಕಣ್ಣೀರು ಮತ್ತು ನಿರಂತರ ಹೋರಾಟ. ಆದರೆ, ವಿಧಿಯ ಸವಾಲುಗಳಿಗೆ ಮಣಿಯದೆ, ತನ್ನ ನೋವನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಸೌಂದರ್ಯ ಲೋಕದ ಧ್ರುವತಾರೆಯಾಗಿ ಮಿನುಗುತ್ತಿರುವ ಉಡುಪಿಯ ಹೆಣ್ಣುಮಗಳೇ ಸ್ಪೂರ್ತಿ ಶೆಟ್ಟಿ.

ಇದು ಕೇವಲ ಬಣ್ಣದ ಲೋಕದ ಕಥೆಯಲ್ಲ; ಇದು ತಾಯಿಯ ಕಣ್ಣೀರು, ಅಪ್ಪನ ಮೌನ ಶ್ರಮ ಮತ್ತು ಮಗಳ ದೃಢ ಸಂಕಲ್ಪದ ಎದೆಮುಟ್ಟುವ ಮಹಾಕಾವ್ಯ.ಅಮ್ಮನ ಒರೆಸಿದ ನೆಲದ ಮೇಲೆ ಮಗಳ ವಿಜಯದ ಹೆಜ್ಜೆಗಳುಉಡುಪಿಯ ಅತ್ಯಂತ ಸರಳ, ಬಡತನದ ಬೇಗೆಯಲ್ಲಿದ್ದ ಕುಟುಂಬವೊಂದರಲ್ಲಿ ಜನಿಸಿದ ಸ್ಪೂರ್ತಿಯ ಬಾಲ್ಯ ಸೌಲಭ್ಯಗಳಿಂದ ಕೂಡಿರಲಿಲ್ಲ. ಅಮ್ಮ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಬೇರೆಯವರ ನೆಲ ಒರೆಸುವ, ಸ್ವಚ್ಛಗೊಳಿಸುವ ಕಠಿಣ ಕೆಲಸ ಮಾಡುತ್ತಿದ್ದರು.”ಅಮ್ಮ ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ಕಷ್ಟಪಡುವಾಗ ಆಕೆಯ ಕೈಗಳಲ್ಲಿದ್ದ ಗಡಸುತನ, ಅಪ್ಪನ ಹೆಗಲ ಮೇಲಿದ್ದ ಸಾಲದ ಭಾರ ಮಗಳ ಎದೆಯನ್ನು ಚುಚ್ಚುತ್ತಿತ್ತು.

ರಾತ್ರಿಯ ಕತ್ತಲೆಯಲ್ಲಿ ದಿಂಬು ನೆನೆಯುವಂತೆ ಅತ್ತ ದಿನಗಳೇ ಹೆಚ್ಚು. ಆದರೆ, ಆ ಕಣ್ಣೀರನ್ನು ಸ್ಪೂರ್ತಿ ತನ್ನ ದೌರ್ಬಲ್ಯವಾಗಲು ಬಿಡಲಿಲ್ಲ; ಬದಲಿಗೆ ತನ್ನ ಯಶಸ್ಸಿನ ಇಂಧನವಾಗಿಸಿಕೊಂಡರು.”ಕುಟುಂಬದ ಆರ್ಥಿಕ ಪರಿಸ್ಥಿತಿ ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದಾಗಲೂ ಛಲ ಬಿಡದ ಈ ಹೆಣ್ಣುಮಗಳು, ಹೆತ್ತವರ ತ್ಯಾಗಕ್ಕೆ ಬೆಲೆ ತರಲು ಹಗಲಿರುಳು ಶ್ರಮಿಸಿ ಎಂಬಿಎ (MBA) ಪದವಿ ಮುಗಿಸಿದರು.

ಇಂದು ಅದೇ ಮಣಿಪಾಲದ MAHE ಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾರೆ.ಕತ್ತಲೆಯ ಸುಳಿಯಿಂದ ಜಾಗತಿಕ ವೇದಿಕೆಯವರೆಗೆಯಾವುದೇ ಬ್ಯಾಕಿಂಗ್ ಇಲ್ಲದೆ, ಕೈಯಲ್ಲಿ ಕಾಸಿಲ್ಲದೆ, ಕೇವಲ ಹೆತ್ತವರ ಆಶೀರ್ವಾದ ಹಾಗೂ ತನ್ನಲ್ಲಿನ ಶಿಸ್ತನ್ನೇ ಬಂಡವಾಳವಾಗಿಸಿಕೊಂಡು ಸ್ಪೂರ್ತಿ ಸೌಂದರ್ಯ ಸ್ಪರ್ಧೆಯ ವೇದಿಕೆಗೆ ಇಳಿದಾಗ ಜಗತ್ತು ಅವಳನ್ನು ಹಗುರವಾಗಿ ಕಂಡಿರಬಹುದು. ಆದರೆ ಆಕೆಯ ಒಂದೊಂದು ಯಶಸ್ಸಿನ ಹಿಂದೆ ನೂರಾರು ಹಸಿದ ರಾತ್ರಿಗಳ ಹೋರಾಟವಿದೆ.

ವರ್ಷಸಾಧನೆಯ ಮೈಲಿಗಲ್ಲುಗಳು :

2018ಮಿಸ್ ಟೀನ್ ಕರ್ನಾಟಕ2019

ಮಿಸ್ ಟಾಪ್ ಮಾಡೆಲ್ ಇಂಡಿಯಾ2020

ಕ್ವೀನ್ ಆಫ್ ಕರ್ನಾಟಕ2021

ಮಿಸ್ ಇಂಟರ್‌ನ್ಯಾಷನಲ್ ಇಂಡಿ ಯೂನಿವರ್ಸ್2024

ಮಿಸ್ ಗ್ರ್ಯಾಂಡ್ ಇಂಡಿಯಾ (ಟಾಪ್-12 ಫೈನಲಿಸ್ಟ್)2026

ಮಿಸ್ ಯೂನಿವರ್ಸ್ ಕರ್ನಾಟಕ (ಪ್ರಥಮ ರನ್ನರ್-ಅಪ್)2026

ಮಿಸ್ ಯೂನಿವರ್ಸ್ ಇಂಡಿಯಾ 2026 (ಫೈನಲಿಸ್ಟ್)ಮಿಸ್ ಯೂನಿವರ್ಸ್

ಕೇವಲ ಗ್ಲಾಮರ್ ಅಲ್ಲ, ಇದು ಅಮ್ಮನಿಗೆ ಅರ್ಪಿಸುವ ಗೌರವಇಂದು ಸ್ಪೂರ್ತಿ ಶೆಟ್ಟಿ ದೇಶವೇ ಹೆಮ್ಮೆಪಡುವಂತೆ ಮಿಸ್ ಯೂನಿವರ್ಸ್ ಇಂಡಿಯಾ 2026ರ ಫೈನಲ್ ಹಂತದಲ್ಲಿದ್ದಾರೆ. ಜಗತ್ತಿನ ಅತಿ ದೊಡ್ಡ ವೇದಿಕೆಯ ಮೇಲೆ ಅವರು ಹೆಜ್ಜೆ ಇಡುತ್ತಿರುವಾಗ, ಅವರ ಕಣ್ಣುಗಳ ಮುಂದೆ ಅಮ್ಮ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಕಷ್ಟಪಡುತ್ತಿದ್ದ ಆ ದಿನಗಳ ಕಣ್ಣೀರು ಸುಳಿದುಹೋಗುತ್ತದೆ.ಅವರಿಗೆ ಈ ಸೌಂದರ್ಯ ಸ್ಪರ್ಧೆ ಕೇವಲ ಸೋಗು ಅಥವಾ ಪ್ರಚಾರದ ವೇದಿಕೆಯಲ್ಲ. ಅದು ಕಡು ಬಡತನದಲ್ಲೂ ಪ್ರಾಮಾಣಿಕತೆಯಿಂದ ಬದುಕಿದ ತನ್ನ ತಾಯಿಗೆ ಮಗಳು ನೀಡುತ್ತಿರುವ ಅತ್ಯುನ್ನತ ಗೌರವ.

ತನ್ನಂತೆ ಕಷ್ಟಪಡುವ ಸಾವಿರಾರು ಹಳ್ಳಿ ಹೆಣ್ಣುಮಕ್ಕಳಿಗೆ “ನಿಮ್ಮ ಹುಟ್ಟು ಎಲ್ಲೇ ಇರಲಿ, ನಿಮ್ಮ ಕನಸುಗಳು ಆಕಾಶದಷ್ಟ ಎತ್ತರವಾಗಿರಲಿ” ಎಂದು ಸಾರುವ ಜೀವಂತ ಸಾಕ್ಷಿ.ನನ್ನ ಮಾತುಹಣೆಬರಹವನ್ನು ದೂರುತ್ತಾ ಕೂರದೆ, ಸ್ವತಃ ತನ್ನ ಹಣೆಬರಹವನ್ನು ತಾನೇ ಬರೆದ ಈ ಛಲದ ಜೋಗಿ ಸ್ಪೂರ್ತಿ ಶೆಟ್ಟಿ ಕನ್ನಡ ನಾಡಿನ ಹೆಮ್ಮೆ. ಕಣ್ಣೀರ ಕಡಲನ್ನು ದಾಟಿ ಬಂದು ಸ್ಪೂರ್ತಿಯ ಶಿಖರವೇರಿ ನಿಂತಿರುವ ಈ ಜೀವಕ್ಕೆ ನಮ್ಮದೊಂದು ಸಲ್ಯೂಟ್.

ಸ್ಪೂರ್ತಿಯ ಮುಡಿಗೆ “ಮಿಸ್ ಯೂನಿವರ್ಸ್ ಇಂಡಿಯಾ” ಕಿರೀಟ ಏರಲಿ, ಆ ಮೂಲಕ ಅವರ ತಾಯಿಯ ಬೆವರಿನ ಹನಿಗಳಿಗೆ ಜಗತ್ತಿನ ಅತ್ಯುನ್ನತ ಗೌರವ ಸಿಗಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಪ್ರಾರ್ಥನೆ.

Related posts

ಅಣ್ಣಾ ಹಜಾರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲುಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ;

Voiceoftulunadu

ಕಾಪು ಸರ್ವೀಸ್ ರಸ್ತೆಯಲ್ಲಿ ವೇಗದೂತ ಬಸ್ಸುಗಳ ಪರಸ್ಪರ ಢಿಕ್ಕಿ, ಸಾರ್ವಜನಿಕರ ಆಕ್ರೋಶ, ಬಸ್ಸು ಠಾಣೆಗೆ: ಸಂದೇಶ್ ಟ್ರಾವೆಲ್ಸ್ ಬಸ್ಸು ಮತ್ತು ಆನಂದ್ ಟ್ರಾವೆಲ್ಸ್ ಚಾಲಕರ ಉದ್ದೇಶಪೂರ್ವಕ ಅಪಘಾತ;

Voiceoftulunadu

ಸೀತಾರಾಮನ್ ಭೇಟಿ ;ದೇವಳದ ಆವರಣದಲ್ಲಿ ಸಸಿ ನೆಟ್ಟ ಸಚಿವೆ ನಿರ್ಮಲಾ ಸೀತಾರಾಮನ್

voiceoftulunadu

Leave a Comment