28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ: ಕುಬೇರಾ ತಂಡಕ್ಕೆ ಶಾರದಾ ಮಾತೆ, ನವ ದುರ್ಗೆಯರ ವಿಗ್ರಹ ನಿರ್ಮಾಣಕ್ಕೆ ವೀಳ್ಯ ;

ವರದಿ /ಚಿತ್ರ :ಈ ಮೀಡಿಯಾ

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿ ಐದನೇ ವರ್ಷದ ದಸರಾವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಆ ಪ್ರಯುಕ್ತ ಭಾನುವಾರ ಶಿವಮೊಗ್ಗದ ವಿಗ್ರಹ ನಿರ್ಮಾಣ ಶಿಲ್ಪಿ ಕುಬೇರಾರವರಿಗೆ ವೀಳ್ಯ ನೀಡಲಾಯಿತು.ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಶ್ರೀಶ ಆಚಾರ್ಯರವರು ಪೀಠ ಪೂಜಾ ವಿಧಿವಿದಾನಗಳನ್ನುನೆರವೇರಿಸಿದರು.

ಈ ಸಂದರ್ಭ ಶಿಲ್ಪಿ ಕುಬೇರಾರವರು ಮಾತನಾಡಿ, ನಮ್ಮತಂಡ 18 ವರ್ಷಗಳಿಂದ ದಸರಾ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಕಳೆದ ಐದು ವರ್ಷಗಳಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಶಾರದೆ ಸಹಿತ ಒಂಬತ್ತು ಮೂರ್ತಿಗಳನ್ನು ರಚಿಸುತ್ತಿದ್ದೇವೆ. ನಮ್ಮ ತಂಡದ್ದಲ್ಲಿ 12 ಕಲಾವಿದರಿದ್ದಾರೆ. ದೇವಳದ ಆಡಳಿತ ಮಂಡಳಿ ತುಂಬು ಹೃದಯದ ಸಹಕಾರನೀಡಿದೆ ಎಂದರು.

ಈ ಸಂದರ್ಭ ದೇವಳದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ವಾಸುದೇವ ಕೋಟ್ಯಾನ್, ಗುಂಡು ಬಿ. ಅಮೀನ್, ನಾರಾಯಣ ಕರ್ಕೇರಾ, ಮೋಹನ ಬಂಗೇರಾ ಕಾಪು, ಸುಗುಣ ಕರ್ಕೇರಾ, ದಿನೇಶ್ ಮೂಳೂರು, ಯಾದವ್ ವಿಕೆ, ಮನೋಜ್ ಕೋಟ್ಯಾನ್ ಬ್ರಹ್ಮಗಿರಿ, ದೇವಳದ ಪ್ರಬಂಧಕ ಸತೀಶ್ ಸಾಲ್ಯಾನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

Related posts

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯಿಂದ ವಯೋವಂದನ ಆತಿಥ್ಯ ಗೃಹ ಯೋಜನೆವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್;

Voiceoftulunadu

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ :ಮಕ್ಕಳ ದಫ್ ಪ್ರದರ್ಶನ, ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡು, ವಾಹನ ಜಾಥಾದ ಮೆರಗು ;

Voiceoftulunadu

ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು,ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆ;

Voiceoftulunadu

Leave a Comment