ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ
ಉಡುಪಿ: ಅಲೆವೂರಿನ ಗಿರಿಜಾ ಸರ್ಕಲ್ ಬಳಿಯ ಸಂಕಲ್ಪ ಸಭಾ ಭವನದಲ್ಲಿ ಸೆಪ್ಟೆಂಬರ್ 4,2026 ರಂದು ವಿನೋದ್ ಶೆಟ್ಟಿಗಾರ್ ಅವರ ಸ್ಮರಣೆಯೊಂದಿಗೆ 4ನೇ ವರ್ಷದ ಲೋಬಾನಾ ಸೇವೆ ಹಾಗೂ ಹುಲಿವೇಷ ಕುಣಿತ ನಡೆಯಲಿದೆ. ಬೆಳಿಗ್ಗೆ 8.00 ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ವೀರಕೇಸರಿ ಟೈಗರ್ಸ್ ಅಲೆವೂರು ‘ ಸಂಘಟನೆಯು ತಮ್ಮ ತನು ಮನ ಧನ ಸಹಕಾರದ ನಿರೀಕ್ಷೆಯಲ್ಲಿ ಆಯೋಜಿಸಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಲೆವೂರಿನ ವೀರಕೇಸರಿ ಟೈಗರ್ಸ್ ತಂಡವು 4ನೇ ಬಾರಿಗೆ ಲೋಬಾನ ಸೇವೆ ಮತ್ತು ಸಾಂಪ್ರದಾಯಿಕ ಹುಲಿವೇಷ ಕುಣಿತವನ್ನು ಆಯೋಜಿಸುತ್ತಿದೆ. ಇದು ಸ್ವರ್ಗೀಯ ವಿನೋದ್ ಶೆಟ್ಟಿಗಾರ್ ಅವರ ಸ್ಮರಣಾರ್ಥವಾಗಿ ನಡೆಯುತ್ತಿರುವುದರಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.ತುಳುನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸಂಕೇತವಾಗಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಮತ್ತು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.
