28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶಾಸಕ ಯಶ್ ಪಾಲ್ ಸುವರ್ಣ ಹುಟ್ಟುಹಬ್ಬ: ಗುಂಡಿಬೈಲ್ ಶನೇಶ್ವರ ಕ್ಷೇತ್ರದಲ್ಲಿ ಹೂವಿನ ಪೂಜೆ ;

ವರದಿ/ ಚಿತ್ರ:ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಉಡುಪಿಯ ನೆಚ್ಚಿನ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ, ಉಡುಪಿಯ ಕಾರ್ಣಿಕದ ಕ್ಷೇತ್ರವಾದ ಗುಡಿಬೈಲ್ ಶ್ರೀ ಶನೇಶ್ವರ ಕ್ಷೇತ್ರದಲ್ಲಿ ಗುಂಡಿಬೈಲು ವಾರ್ಡ್ ಬಿಜೆಪಿ ವತಿಯಿಂದ ಹೂವಿನ ಪೂಜೆ ನೆರವೇರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಗುಂಡಿಬೈಲು ವಾರ್ಡಿನ ನಗರಸಭಾ ಸದಸ್ಯರು ಹಾಗೂ ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಶನೇಶ್ವರ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಶೇಖರ್ ಜತ್ತನ್, ಪುರೋಹಿತರು, ಶನೇಶ್ವರ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಿನೋದ್ ಶೆಟ್ಟಿ, ಸಂಘಟನೆ ಕಾರ್ಯದರ್ಶಿ ಶ್ರೀ ಭವಿಷ್, ಗುಂಡಿಬೈಲು ಬಿಜೆಪಿ ವಾರ್ಡ್ ಅಧ್ಯಕ್ಷರಾದ ಶ್ರೀ ನವೀನ್ ಕೋಟ್ಯಾನ್, ಕಾರ್ಯಕರ್ತರಾದ ಶ್ರೀ ದಿನೇಶ್ ಪೂಜಾರಿ, ಶ್ರೀ ನರಸಿಂಹ ಎಸ್.ಆರ್ ಹಾಗೂ ವಾರ್ಡಿನ ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅವರು ಆರೋಗ್ಯ, ಆಯಸ್ಸು, ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

Related posts

ಬದಿಯಡ್ಕದ ‘ಕನ್ನಡ ಭವನ’ ಲೋಕಾರ್ಪಣೆ: ಕೇರಳ ಸಿಎಂಗೂ ಆಹ್ವಾನ, ಗಡಿನಾಡು ಕನ್ನಡಿಗರ ಬೇಡಿಕೆಗಳ ಮನವಿ ಸಲ್ಲಿಕೆ :

Voiceoftulunadu

ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ ಈಥನ್ ರಫಾಯೆಲ್ ತೌರೊ ನೇಮಕ

Voiceoftulunadu

ಮಂಗಳೂರಿನ ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ (ಒಳಾಂಗಣ ಕ್ರೀಡಾ) ಇಂಡೋರ್ ಗೇಮ್ ದಿನಾಚರಣೆ;

Voiceoftulunadu

Leave a Comment