ವರದಿ/ ಚಿತ್ರ :ಈ ಮೀಡಿಯಾ
ಬೆಳ್ಳಣ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಟ್ಟೆ ಕಾರ್ಯಕ್ಷೇತ್ರದ ಬೆಳ್ಳಣ್ ವಲಯದಿಂದ ಸಾಮೂಹಿಕ ವರಮಹಾಲಕ್ಷ್ಮಿಪೂಜೆ ಶುಕ್ರವಾರ ಶ್ರೀಕೇಶವ ಭಜನಾ ಮಂಡಳಿ ಪರಪ್ಪಾಡಿ ನಿಟ್ಟೆ ಇಲ್ಲಿ ವಿಜೃಂಭಣೆಯಿಂದ ನೆರವೇರಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷರು ಸುರೇಶ್ ಭಟ್ ವಹಿಸಿದ್ದರು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿಶ್ರೀಮತಿ ಮಮತಾ ಶೆಟ್ಟಿ ಉದ್ಘಾಟಿಸಿದರು. ಧಾರ್ಮಿಕ ಉಪಾನ್ಯಾಸವನ್ನು ಶ್ರೀಮತಿ ಶಾರದಾ ಶೇಟ್ನೀಡಿದರು.
ಅತಿಥಿಗಳಾಗಿ ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಶಂಕರ್ ಕುಂದರ್ ಸೂಡ, ಬಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಆಚಾರ್ಯ ನಿಟ್ಟೆ, ನಿವೃತ್ತ ಪಿಡಿ ಮುರಳಿಧರ ಶರ್ಮ, A ಒಕ್ಕೂಟದ ಅಧ್ಯಕ್ಷ ರಾಜೇಶ್ ಬಂಗೇರ ನಿಟ್ಟೆ, ಕೇಶವ ಭಜನಾ ಮಂಡಳಿಯ ಅಧ್ಯಕ್ಷ ಉದಯಕುಮಾರ್, ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಸುಬ್ರಮಣ್ಯ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾ ಪ್ರತಿನಿಧಿ ಶ್ವೇತಾ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರಜನಿ ಸೂಡ ವಂದಿಸಿದರು.
