ಉಡುಪಿ: ಉಡುಪಿಯ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಕುಂಜಿಬೆಟ್ಟು ಇಲ್ಲಿ ಆಗಸ್ಟ್ 17 ರಂದು ಸೋಣ ತಿಂಗಳ ” ಹೂವಿನ ಪೂಜೆ ” ನಡೆಯಲಿದೆ. ಇದಲ್ಲದೆ ಆ ದಿನ ಸಂಜೆ 6 ರಿಂದ ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಹಾಗೂ ಕೊರಗಜ್ಜ ದೈವದ ದರ್ಶನ ಸೇವೆಯು ನಡೆಯಲಿರುವುದು.

ಈ ದೈವ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳನ್ನು , ತನು ಮನ ಧನ ಸಹಕಾರದೊಂದಿಗೆ ಭಾಗವಹಿಸಿ, ಶ್ರೀ ದೇವರ ಪುಣ್ಯ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಓಕುಡೆ ಕುಟುಂಬಸ್ಥರು, ಹಂಚಿನ ಮನೆತನಸ್ಥರು , ಗ್ರಾಮಸ್ಥರು ಹಾಗೂ ಊರಿನ ಹತ್ತು ಸಮಸ್ತರು ಅಪೇಕ್ಷಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ಈ ಕೆಳಗಿನ ಸಂಖ್ಯೆಗಳಿಗೆ ಕರೆಮಾಡಿ ವಿಚಾರಿಸುವಂತೆ ಕೋರಲಾಗಿದೆ.
7338086511
9900404173
9164044153
