ವರದಿ/ ಚಿತ್ರ :ಈ ಮೀಡಿಯಾ
ಉಡುಪಿ : ಉಡುಪಿಯ ಶ್ರೀ ಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಹಳೆವಿದ್ಯಾರ್ಥಿಸಂಘದ ವತಿಯಿಂದ “ಸಂವಿಧಾನ ಅಂದು ಹಾಗೂ ಇಂದು” ಎಂಬ ಉಪನ್ಯಾಸ ಕಾರ್ಯಕ್ರಮವು ನಡೆಯಿತು.ಪ್ರಸಿದ್ಧ ಅಂಕಣ ಬರಹಗಾರ ವಾಗಿ ರೋಹಿತ್ ಚಕ್ರತೀರ್ಥರವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಾಚೀನಕಾಲದಲ್ಲಿ ಇದ್ದಂತಹ ಶಾಸ್ತ್ರಿಯ ಸಂವಿಧಾನದ ಜೊತೆಗೆ ಅರ್ವಾಚೀನ ಸಂವಿಧಾನದ ವಿಚಾರಗಳನ್ನು ರೋಹಿತ್ ಚಕ್ರತೀರ್ಥರವರು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಎಸ್ ಎಂ ಎಸ್ ಪಿ ಸಭೆಯ ಕಾರ್ಯದರ್ಶಿಗಳಾದ 2. ಗೋಪಾಲ ಜೋಯಿಸ, ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ. ಎಸ್ ಅಮೃತೇಶಾಚಾರ್ಯ ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾಯೋಜಕರಾದ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿ. ಹರ್ಗ ಹರಿಪ್ರಸಾದ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾ. ರಾಧಾಕೃಷ್ಣ ಬಿ ಇವರು ವಂದಿಸಿದರು.
