28.5 C
ಮಂಗಳೂರು
September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಂಗಳೂರಿನ ಆರ್ ಟಿ ನಗರದಲ್ಲಿ ಬೇಕರಿಗೆ ಹಲ್ಲೆ, ದಾಂಧಲೆ – ಎಫ್ ಐ ಆರ್ ದಾಖಲು ;

ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಬೆಂಗಳೂರು : ಆರ್ ಟಿ ನಗರದಲ್ಲಿ ಸಾಲ ಕೊಡಲು ನಿರಾಕರಿಸಿದಕ್ಕೆ ಸಣ್ಣ ಬೇಕರಿ ಮಾಲೀಕರ ಮೇಲೆ ಹಲ್ಲೆ ನಡೆದಿದೆ.

ಘಟನೆ ವಿವರ: ದಿನಾಂಕ 19/7/2026 ರಂದು ಆರ್ ಟಿ ನಗರದ “ಮಂಜುನಾಥ ಕಾಂಡಿಮೆಂಟ್ಸ್” ಬೇಕರಿಗೆ ಬಂದ 2 ಪುಂಡರು ಸಾಲ ಕೇಳಿದ್ದಾರೆ. ಮಾಲೀಕರಾದ ಚಂದ್ರಶೇಖರ್ ಶೆಟ್ಟಿ ಮತ್ತು ರೂಪ ಶೆಟ್ಟಿ ಅವರು ನಿರಾಕರಿಸಿದಾಗ, ಆಕ್ರೋಶಗೊಂಡ ಅವರು ಇನ್ನೂ ಕೆಲವು ರೌಡಿಗಳನ್ನು ಕರೆತಂದು ಅಂಗಡಿಯಲ್ಲಿ ದಾಂಧಲೆ ನಡೆಸಿದ್ದಾರೆ.

ಹಲ್ಲೆಗೈದಿದ್ದಲ್ಲದೆ ಅಂಗಡಿಯ ಸಂಪೂರ್ಣ ಸಾಮಾನುಗಳನ್ನು ಧ್ವಂಸ ಮಾಡಿದ್ದಾರೆ.

ದೂರು ಮತ್ತು ಕ್ರಮ: ಇದೇ ವಿಷಯವಾಗಿ ಇಂದು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ನೇತೃತ್ವದಲ್ಲಿ ದೂರು ನೀಡಲಾಗಿದೆ.ಒಕ್ಕೂಟದ ರಾಜ್ಯಾಧ್ಯಕ್ಷ ಡಿ ಬಿ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷರಾದ ಭೋಜರಾಜ ಶೆಟ್ಟಿ, ಸುನಿಲ್ ಶೆಟ್ಟಿ ಜೆ, ಚಂದ್ರಶೇಖರ್ ಶೆಟ್ಟಿ, ಸುಕೇಶ್ ಶೆಟ್ಟಿ ಜೆ ಮತ್ತು ತಂಡ ಅಂಗಡಿ ಮಾಲೀಕರೊಂದಿಗೆ ಠಾಣೆಗೆ ತೆರಳಿದ್ದರು.

ಪೊಲೀಸರು ತಕ್ಷಣವೇ FIR ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡ ಅಂಗಡಿ ಮಾಲೀಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ರೋಟರಿ ಸಂಸ್ಥೆಯು ಸಮಾಜಕ್ಕೆ ಸೇವೆ ನೀಡುವ ಮಾದರಿ ಸಂಸ್ಥೆ : ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಪಡುಬಿದ್ರಿ ಸಹಕಾರಿ ಸಂಸ್ಥೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ;

Voiceoftulunadu

ಅಯೋಧ್ಯೆ: ರಾಮಭಕ್ತರು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ;

Voiceoftulunadu

ಅಹಮದಾಬಾದಿನಲ್ಲಿ ಪ್ರಿಯತಮನಿಗಾಗಿ 1.66 ಕೋಟಿ ಚಿನ್ನ ಕದ್ದು ಪರಾರಿಯಾದ ಹರ್ಷಿದಾ ಶೆಟ್ಟಿ ಇಬ್ಬರ ಬಂಧನ:

voiceoftulunadu

Leave a Comment