ಪ್ರತಿ ವರ್ಷದಂತೆ ಈ ವರ್ಷವೂ, ದಕ್ಷಿಣ ಕಾಶಿಯೆಂದೇ ಖ್ಯಾತಿ ಪಡೆದ ಕೇರಳದ ಕೊಟ್ಟಿಯೂರು ಶಿವ ಕ್ಷೇತ್ರದ ವೈಶಾಖ ಮಹೋತ್ಸವ ನಡೆಯಲು ಕ್ಷಣಗಣನೆ ಆರಂಭವಾಗಿದ್ದು, ಮೇ 30 ರಿಂದ ಭಕ್ತರಿಗೆ ದೇವರ ದರ್ಶನವನ್ನು ಆರಂಭಿಸಲಾಗಿದೆ.

ಕೊಟ್ಟಿಯೂರು ವೈಶಾಖ ಮಹೋತ್ಸವದ ಹಿನ್ನೆಯಲ್ಲಿ ಕ್ಷೇತ್ರದ ದೇವರ ದರ್ಶನ ಮೇ 30 ರ ಮಧ್ಯ ರಾತ್ರಿಯಿಂದ ಪ್ರಾರಂಭವಾಗುತ್ತದೆ. ಸ್ತ್ರೀಯರಿಗೆ ದೇವರ ದರ್ಶನ ಮಾಡಲು ಜೂನ್ 20 ರ ಮಧ್ಯಾಹ್ನದವರೆಗೆ ಮಾತ್ರ ಅವಕಾಶವಿದೆ.

ಜೂನ್ 24 ರಂದು ಈ ವರ್ಷದ ಕೊನೆಯ ಪೂಜೆಯು ನಡೆಯಲಿದೆ ಎಂಬುವುದಾಗಿ ತಿಳಿದು ಬಂದಿದೆ. ದೇವರ ದರ್ಶನಕ್ಕೆ ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಅವಕಾಶವಿದೆ ಎಂದು ಹೇಳಲಾಗಿದೆ.

