27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಸಾಂಪ್ರದಾಯಿಕ ನಾಟಿ ಮುಂದುವರಿಸುತ್ತಿರುವ ಯುವ ರೈತ ಹರೀಶ್ ಪೂಜಾರಿ ಕಿಶೋ‌ರ್ ಪೂಜಾರಿ : ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಸದಸ್ಯರಿಂದ ಶ್ಲಾಘನೆ;

ವರದಿ/ ಚಿತ್ರ: ಈ ಮೀಡಿಯಾ

ಎಲ್ಲೂರು: ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಳಗಿನ ಮನೆಯ ಯುವ ರೈತ ಹರೀಶ್ ಪೂಜಾರಿ ಮತ್ತು ಕಿಶೋರ್ ಪೂಜಾರಿ ಸಹೋದರರು ಸಾಂಪ್ರದಾಯಿಕ ನಾಟಿ ಕಾರ್ಯವನ್ನು ಮುಂದುವರಿಸುತ್ತಿದ್ದು ಸ್ಥಳೀಯ ಎಲ್ಲಾ ರೈತರಿಗೂ ಮಾದರಿಯಾಗಿದ್ದಾರೆ.

ತಮ್ಮ ಹಿರಿಯರಿಂದ ಬಂದ ಸುಮಾರು 10 ಎಕರೆ ಕೃಷಿ ಭೂಮಿಯನ್ನು ಇವರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಾಟಿ ಮಾಡುತ್ತಿದ್ದು, ಕೃಷಿ ಕಾರ್ಮಿಕರ ಅಭಾವವಿದ್ದರೂ ಹೊರ ಜಿಲ್ಲೆಗಳಿಂದ ಕೃಷಿ ಕಾರ್ಮಿಕರನ್ನು ತರಿಸಿ ನಾಟಿ ಮಾಡುತ್ತಿರುವ ಇವರು ನೆರೆಕೆರೆಯ ರೈತರಿಗೂ ನಾಟಿ ಮಾಡಲು ಸಹಕರಿಸುತ್ತಿದ್ದಾರೆ.

ಸರಕಾರದಿಂದ ಸರಿಯಾದ ಸಮಯಕ್ಕೆ ರಸಗೊಬ್ಬರಗಳು ಸಿಗುತ್ತಿಲ್ಲ ಎಂಬ ನೋವನ್ನು ತೋಡಿಕೊಂಡ ಇವರು, ಸರಕಾರವುರೈತರಿಗೆ ಸಂಪೂರ್ಣ ಸವಲತ್ತನ್ನು ಸಕಾಲದಲ್ಲಿ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಇವರ ಸಾಂಪ್ರದಾಯಿಕ ನಾಟಿ ಪದ್ಧತಿಯನ್ನು ವೀಕ್ಷಿಸಿದ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ಉದ್ಯಾವರ, ಕಾಪು ಬ್ಲಾಕ್ ದಕ್ಷಿಣ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷರಾದ ಪಾಂಡು ಶೆಟ್ಟಿ ಎಲ್ಲೂರು, ಸ್ಥಳೀಯ ರೈತರಾದ ಶಶಿ ಶೆಟ್ಟಿ ಬರ್ಪಾಣಿ, ಮಿತ್ರ ಅಂಚನ್ ಗುಂಡಿ ತೋಟ, ಶಂಕರ್ ಪೂಜಾರಿ ಮುಂತಾದವರು ಹರೀಶ್ ಪೂಜಾರಿ ಹಾಗೂ ಕಿಶೋರ್ ಪೂಜಾರಿ ಸಹೋದರ ಕೃಷಿ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ನಡೆದ ಅವ್ಯವಸ್ಥೆಯ ಹಿನ್ನೆಲೆ; ಹೊರಗಡೆಯಿಂದ ಬಂದ ಭಕ್ತಾದಿಗಳಿಗೆ ಮಾಹಿತಿಯ ಕೊರತೆಯಿಂದ ಹಾಗೂ 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದಾಗಿ ಅವ್ಯವಸ್ಥೆಯು ಉಂಟಾಗಿದೆ – ಕಣ್ಣೂರು ಡಿಐಜಿ ಸ್ಪಷ್ಟನೆ:

voiceoftulunadu

ಬಂಟಕಲ್ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಉದ್ಯೋಗ, ಕೌಶಲ್ಯ ವೃದ್ಧಿಗಾಗಿ ಉಪಾನ್ಯಾಸ ನೀಡಿದ ಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯ;

Voiceoftulunadu

ಉಡುಪಿ: ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವೈಭವದ ವಾರ್ಷಿಕ ನೇಮೋತ್ಸವ

Voiceoftulunadu

Leave a Comment