ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ
ಉಡುಪಿ: ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ *ಶ್ರೀ ಕೊರಗಜ್ಜ ದೈವಸ್ಥಾನ*ದಲ್ಲಿ ಹರಕೆಯ ಕೋಲ ಸೇವೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.

ವಿಶೇಷ ಸನ್ಮಾನ ಕಾರ್ಯಕ್ರಮ : ಈ ಸಂದರ್ಭದಲ್ಲಿ ದೈವರಾಧನಾ ಕ್ಷೇತ್ರ, ಸಮಾಜ ಸೇವೆ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಮೆಚ್ಚಿ, *ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಸಂಸ್ಥಾಪಕ ಅಧ್ಯಕ್ಷ, ನಮ್ಮ ಉಡುಪಿ ಟಿವಿ ವಿನೋದ್ ಶೆಟ್ಟಿ ಅವರನ್ನು ಕ್ಷೇತ್ರದ ವತಿಯಿಂದ ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗಣ್ಯರ ಉಪಸ್ಥಿತಿ : ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮುಖ್ಯಸ್ಥ ಭರತ್ ಪೂಜಾರಿ, ಕುಟುಂಬಸ್ಥರು, *ಅಖಿಲ ಭಾರತ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಅಂಚಾರು* ಹಾಗೂ ಪ್ರಮುಖ ಅತಿಥಿಗಳು ಉಪಸ್ಥಿತರಿದ್ದರು.
