ಮೂಲ್ಕಿ : ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ
5ನೇ ವರ್ಷದ ಸಂಭ್ರಮಾಚರಣೆಯ ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯ ಸಂಯೋಜನೆಯಲ್ಲಿ ಹಳೆಯಂಗಡಿ ಹರಿಓಂ ಕಟ್ಟಡದ ಆವರಣದಲ್ಲಿ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿ., ಮುಲ್ಕಿ ಅರಮನೆ ವೆಲ್ಲೇರ್ & ಚಾರಿಟೇಬಲ್ ಟ್ರಸ್ಟ್ ಮುಲ್ಕಿ, ಪತ್ರಕರ್ತರ ಸಂಘ, ಮುಲ್ಕಿ ವಲಯ, ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಭಗವತಿ ಫ್ರೆಂಡ್ಸ್ ಸಸಿಹಿತ್ಲು, ಶ್ರೀ ಭಗವತಿ ಯುನೈಟೆಡ್ ಫ್ರೆಂಡ್ಸ್ ಕದಿಕೆ, ಹಳೆಯಂಗಡಿ, ಯಶಸ್ವಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಹಳೆಯಂಗಡಿ ವಿವೇಕಾನಂದ ಯುವಕ ಮಂಡಲ, ಚೇಳ್ಯಾರು, ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ ಲೈಟ್ ಹೌಸ್ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಈಶ್ವರಾನಂದ ಭಜನಾ ಮಂದಿರ ಚೇಳ್ಯಾರು, ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ. ಹಳೆಯಂಗಡಿ, ಓಂ ಕ್ರಿಕೇಟರ್ಸ್ ಪಾವಂಜೆ, ಸಾಗರ ಸಾಗ್ ಕ್ರಿಕೇಟರ್ಸ್ ಸಾಗ್, ಹಳೆಯಂಗಡಿ, ಸಂಗಮ ಮಹಿಳಾ ಮಂಡಲ ಇಂದಿರಾನಗರ ಇವರ ಸಹಯೋಗದಲ್ಲಿ ನಡೆಯಿತು.

ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾರ್ಡ್ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿದರು.
ಕಟೀಲು ಶ್ರೀ ದುರ್ಗಾ ಸಙಜೀವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಶಿವಾನಂದ ಪ್ರಭು ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್ ರಮೇಶ್ ಶಿಬಿರವನ್ನು ಉದ್ಘಾಟಿಸಿದರು.
ಮೀರಾ ಕಿಲ್ಪಾಡಿ, ಉಷಾ ಪಕ್ಷಿಕೆರೆ, ಮಾಲಿನಿ ನಾಯ್ಕ, ವಿಶಾಲಾಕ್ಷಿ ಆಚಾರ್ಯ ಕಿನ್ನಿಗೋಳಿ, ಸಿಂಚನ ಎರ್ಮಾಳ್ ಅವರಿಗೆ ಸುಮಾರು 50 ಸಾವಿರ ವೆಚ್ಚದ ಹೊಲಿಗೆ ಯಂತ್ರವನ್ನು ಉಚಿತವಾಗಿ ಸಹಾಯ ಹಸ್ತ ಯೋಜಬೆಯ ಮೂಲಕ ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ ಹಸ್ತಾಂತರಿಸಿದರು
ವುಡ್ ಸೈಡ್ ಮಂಗಳೂರಿನ ಜನರಲ್ ಮ್ಯಾನೇಜರ್ ಎಚ್. ಭಾಸ್ಕರ ಸಾಲ್ಯಾನ್ , ತಾಲೂಕು ಪಂಚಾಯತ್ ಮಾಜಿ ಸದಸ್ಯ ಮನ್ಸೂರ್ ಸಾಗ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಮೋಹನ್ ಕೋಟ್ಯಾನ್,
ಮೂಲ್ಕಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಯೋಗೀಶ್ ಕೋಟ್ಯಾನ್ ತೋಕೂರು, ಸೊಸೈಟಿಯ ಉಪಾಧ್ಯಕ್ಷ ವಿಜಯಕುಮಾರ್ ಸನಿಲ್,ತಜ್ಞ ವೈದ್ಯರಾದ ಡಾ. ನಿತ್ಯಾನಂದ ಚೌಟ, ಡಾ. ಸುಧೀಂದ್ರ ಕಾರ್ನಾಡ್, ಡಾ. ಕೀರ್ತನ್ ರಾವ್, ಡಾ. ಉಣ್ಣಿಕೃಷ್ಣನ್ ನೈನಾರ್, ಡಾ. ಸಂಗೀತ ಭಟ್ ಮತ್ತಿತರರು ಇದ್ದರು.
ಶಿಬಿರದಲ್ಲಿ ಇಸಿಜಿ ಸೇವೆ ಶುಗರ್ ಮತ್ತು ಬಿ ಪಿ ಪರೀಕ್ಷೆ, ಕನ್ನಡಕ ವಿತರಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ, ಹಲ್ಲಿನ ಎಲ್ಲಾ ತರಹದ ತಪಾಸಣೆ ನಡೆಸಲಾಯಿತು.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಸುದರ್ಶನ್ ವಂದಿಸಿದರು. ಅಭಿಜ್ಞಾ ಜೈನ್, ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.
