September 5, 2026
Uncategorizedಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮನಪಾ ನಿರ್ಲಕ್ಷ್ಯ: ಕಾವೂರು-ಜ್ಯೋತಿನಗರ ಬಸ್ ನಿಲ್ದಾಣ, “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ ಸಾರ್ವಜನಿಕರ ಕರೆಗೆ ಒಗ್ಗಟ್ಟಾದ “ಮೀಡಿಯಾ ಮನಸುಗಳು” ;

ವರದಿ /ಚಿತ್ರ : ಈ ಮೀಡಿಯಾ

ಮಂಗಳೂರು:ಮಂಗಳೂರು ನಗರ ಪಾಲಿಕೆಯ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕಾವೂರು ಜ್ಯೋತಿ ನಗರದ ಬಸ್ ತಂಗುದಾಣ ನಿರ್ವಹಣೆಯಿಲ್ಲದೆ ಸೊರಗಿದ್ದು, ‘ಮೀಡಿಯಾ ಮನಸುಗಳು ತಂಡ ಕೈಯಲ್ಲಿ ಪೊರಕೆ, ಕಳೆ ಕತ್ತುವ ಸಲಕರಣೆಗಳನ್ನು ಹಿಡಿದು ಸುವ್ಯವಸ್ಥಿತಗೊಳಿಸಿದೆ.

ಕಾವೂರು ಜ್ಯೋತಿ ನಗರದ ಬಸ್ ತಂಗುದಾಣದ ಸುತ್ತಮುತ್ತ ಬೆಳೆದು ನಿಂತ ದಟ್ಟವಾದ ಹುಲ್ಲು ಮತ್ತು ಗಿಡಮರಗಳು, ಒಳಗೆ ಕಾಲಿಡಲು ಅಸಾಧ್ಯವಾಗುವಂತೆ ಗಬ್ಬೆದ್ದು ನಾರುತ್ತಿದ್ದ ಪರಿಸ್ಥಿತಿ. ಪಕ್ಕದ ಪುಟ್ ಪಾತ್ ಅಕ್ರಮಿಸಿಕೊಂಡಿದ್ದ ಗಿಡಗಂಟಿಗಳು, ಪ್ರಯಾಣಿಕರು ಬಸ್ಸಿಗೆ ಕಾಯಲು ನೆರಳು ನೀಡಬೇಕಿದ್ದ ಆ ಸಂಜೆ ಕತ್ತಲಾಗುತ್ತಿದ್ದಂತೆ ಕುಡುಕರು ಹಾಗೂ ಅಲೆಮಾರಿಗಳ ಅಡ್ಡೆಯಾಗುತ್ತಿತ್ತು.

ಬಸ್ಸಿಗಾಗಿ ನಿಲ್ಲಬೇಕಿದ್ದ ಹಿರಿಯರು, ಹೆಣ್ಣುಮಕ್ಕಳು ಹಾಗೂ ಶಾಲಾ ಮಕ್ಕಳು ಭಯದಲ್ಲೇ ಬಿಸಿಲು-ಮಳೆಯಲ್ಲಿ ಹೊರಗಡೆ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿತ್ತು. ತಾಣ,ಈ ಅಧೋಗತಿಗೆ ಒಳಗಾದ ಬಸ್ ನಿಲ್ದಾಣದ ನೋವನ್ನು ಕಣ್ಣಾರೆ ಕಂಡ ಸ್ಥಳೀಯ ಸಾರ್ವಜನಿಕರೊಬ್ಬರು ಸಮಸ್ಯೆಯನ್ನು ಪರಿಹರಿಸುವಂತೆ ಮಂಗಳೂರಿನ ಮನಸುಗಳು” ‘ಮೀಡಿಯಾ ತಂಡವನ್ನು ನಿಲ್ದಾಣಕ್ಕೆ ಸಂಪರ್ಕಿಸಿದ್ದರು.

ಬಸ್ಭೇ ನಿಲ್ದಾಣಕ್ಕೆ ಭೇಟಿ ಕೊಟ್ಟು ವಸ್ತುಸ್ಥಿತಿ ಅರಿತುಕೊಂಡ ತಂಡವು ತಡಮಾಡದೆ ಕಾವೂರು ಜ್ಯೋತಿನಗರಕ್ಕೆ ದೌಡಾಯಿಸಿತ್ತು.ಕೈಯಲ್ಲಿ ಪೊರಕೆ, ಕಳೆ ಕತ್ತುವ ಸಲಕರಣೆಗಳನ್ನು ಹಿಡಿದು ಬಂದ ತಂಡದ ಸದಸ್ಯರು, ಸ್ವತಃ ತಮ್ಮ ಕೈಯಿಂದಲೇ ನಿಲ್ದಾಣದ ಕಳೆ ಕೀಳುವ ಮತ್ತು ಸ್ವಚ್ಛಗೊಳಿಸುವ ಕಾಯಕಕ್ಕೆ ಮುಂದಾದರು. ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ನಿಲ್ದಾಣ ಪರಿಸರವನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸ್ವಚ್ಛಗೊಳಿಸಿ ಕಣ್ಣಿಗೆ ಮುದ ನೀಡುವಂತೆ ತೊಳೆದು ಸಾರ್ವಜನಿಕ ಬಳಕೆಗೆ ಯೋಗ್ಯವನ್ನಾಗಿಸಿದರು.

ಬಸ್‌ ಪ್ರಯುಣಿಕರಿಂದ ಕೃತಜ್ಞತೆ ಅನಾಥವಾಗಿದ್ದ ಬಸ್ ನಿಲ್ದಾಣಕ್ಕೆ ಹೊಸ ಜೀವ ತುಂಬಿದ ಈ ಸೇವಾ ಕಾರ್ಯದಲ್ಲಿ ‘ಮೀಡಿಯಾ ಮನಸುಗಳು” ತಂಡದನೆರವಾಗಿದ್ದಾರೆ.ಪ್ರಮುಖರಾದ ಶಶಿ ಬೆಳ್ಳಾಯರು, ಬಾಲಕೃಷ್ಣ ಶೆಟ್ಟಿ, ಸಂದೇಶ್ ಶೆಟ್ಟಿ, ಶಿವು ಕುಲಾಲ್, ಗಿರೀಶ್ ಮಣೇಲ್ ಹಾಗೂ ಅನೂಪ್ ಸೂರಿಂಜೆ ಅವರು ಸಕ್ರಿಯವಾಗಿ ಪಾಲ್ಗೊಂಡು ಯುವ ಸಮುದಾಯಕ್ಕೆ ಮಾದರಿಯಾದರು.ಇಂದು ಸ್ವಚ್ಛವಾಗಿರುವ ಬಸ್ ನಿಲ್ದಾಣವನ್ನು ಕಂಡು ಸ್ಥಳೀಯರು ಮತ್ತು ಬಸ್ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮ ಕಷ್ಟಕ್ಕೆ ಸ್ಪಂದಿಸಿ, ಸ್ವಾರ್ಥರಹಿತ ಸೇವೆ ನೀಡಿದ “ಮೀಡಿಯಾ ಮನಸುಗಳು” ಬಳಗಕ್ಕೆ ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಸ್ಥಳೀಯ ಮಾತೃಶ್ರೀ ಹೋಟೆಲ್ ನ ಮಾಲಕರಾದ ಯತಿರಾಜ್ ಶೆಟ್ಟಿ ಅವರು ಸ್ವಚ್ಛತಾ ಕಾರ್ಯಕ್ಕೆ ನೀರಿನ ವ್ಯವಸ್ಥೆ ಮಾಡಿಕೊಡುವ ಮೂಲಕ ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ಸಮಸ್ಯೆಯನ್ನು ಕಂಡೂ ಕಣ್ಣು ಮುಚ್ಚಿಕೊಂಡಾಗ, ಸಮಾಜಮುಖಿ ಯುವಕರ ತಂಡ ಒಗ್ಗಟ್ಟಾದಾಗ ಹೇಗೆ ಬದಲಾವಣೆ ತರಬಲ್ಲುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.

Related posts

ರಾಷ್ಟ್ರೀಯ ಗೌರವ ಐಕಾನ್ ಪ್ರಶಸ್ತಿ’ಗೆ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಆಯ್ಕೆ ;

Voiceoftulunadu

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

Voiceoftulunadu

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು ‘ಗರ್ಭಕಂಠ ಕ್ಯಾನ್ಸರ್ ಲಸಿಕೆ’ ಪಡೆಯುವುದು ಕಡ್ಡಾಯ! ;

Voiceoftulunadu

Leave a Comment