September 6, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮರ್ಕಂಜ ಗ್ರಾಮದ ಕುದುಳಿ ಮನೆ ನಿವಾಸಿ ಚೇತನ್ ಕುಮಾರ್ ಕೆ.ಎಸ್. ನಿಧನ ;

ಮಂಗಳೂರು: ಮರ್ಕಂಜ ಗ್ರಾಮದ ಕುದುಳಿ ಮನೆ ನಿವಾಸಿ ಹಾಗೂ ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚೇತನ್ ಕುಮಾರ್ ಕೆ.ಎಸ್. (39) ಅವರು ಆಗಸ್ಟ್ 29ರಂದು ನಿಧನರಾದರು.ಆರೋಗ್ಯವಾಗಿದ್ದ ಅವರು ಆಗಸ್ಟ್ 25ರಂದು ರಾತ್ರಿ ಮನೆಯಲ್ಲಿ ಕುಳಿತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದರೆನ್ನಲಾಗಿದೆ.

ತಕ್ಷಣ ಅವರನ್ನು ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಧಿಕ ರಕ್ತದೊತ್ತಡದಿಂದಾಗಿ ಬ್ರೈನ್ ಹ್ಯಾಮರೇಜ್ ಸಂಭವಿಸಿತ್ತೆನ್ನಲಾಗಿದೆ. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಗಸ್ಟ್ 29ರಂದು ಅವರು ಕೊನೆಯುಸಿರೆಳೆದರು.

ಮೃತರು ತಂದೆ ಕುದುಳಿ ಸೋಮಯ್ಯ ಗೌಡ, ತಾಯಿ ಶ್ರೀಮತಿ ತೀರ್ಥ, ಪತ್ನಿ ಶ್ರೀಮತಿ ಮೇಘಶ್ರೀ, ಪುತ್ರಿ ಸಂಹಿತಾ, ಸಹೋದರಿ ಚಿತ್ರಾ, ಮಾವ ದಾಮೋದರ ಕನ್ನಡ್ಕ, ಅತ್ತೆ ಮೋಹನಾಂಗಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಚೇತನ್ ಕುಮಾರ್ ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಅಡ್ಯಾರ್‌ನಲ್ಲಿ ೧೧ನೇ ವರ್ಷದ ಪಟ್ಲ ಸಂಭ್ರಮ ೨೦೨೬, ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

Voiceoftulunadu

ಬಿ.ಸಿ.ರೋಡ್‌: ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ, ವಿದ್ಯಾರ್ಥಿವೇತನ ವಿತರಣೆ : ವೃತ್ತ ಲೋಕಾರ್ಪಣೆ ಗೈದ ಸಂಸದ ಕ್ಯಾ, ಬ್ರಿಜೇಶ್ ಚೌಟ;

Voiceoftulunadu

ಮೂವರ ಜೀವ ಉಳಿಸಿದ ವಿಟ್ಲ ಎಸ್‌ಐ;

Voiceoftulunadu

Leave a Comment