September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ ಮರ್ಮೈಡ್’ ಅಂದರೆ ಮತ್ಮಕನ್ಯ ವೇಷ : 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ, ಈಬಾರಿ 15 ಲಕ್ಷ ರೂ. ನಿರೀಕ್ಷೆ ;

ವರದಿ/ ಚಿತ್ರ :ಈ ಮೀಡಿಯಾ

ಕಟಪಾಡಿ:ಸುಮಾರು ಹತ್ತು ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸುಮಾರು 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಮರ್ಮೈಡ್’ ಅಂದರೆ ಮತ್ತ್ವಕನೈಯಾಗಿದ್ದಾರೆ.ಮಕ್ಕಳ ಪಾಲಿಗೆ ಸೇವಾ ಶಕ್ತಿಯಾದ ರವಿಯವರಿಗೂ ಕಳೆದ ವರ್ಷ ಅನಾರೋಗ್ಯ ಕಾಡಿತ್ತು.

ವೇಷ ಹಾಕಲು ಸಾಧ್ಯವಾಗಿಲಿಲ್ಲ. ವೈದ್ಯರು ಈ ಬಗ್ಗೆ ಜಾಗರೂಕರಾಗಿರುವಂತೆ ತಿಳಿಸಿದ್ದರೂ, ಸೇವಾ ತುಡಿತದ ರವಿಯವರು ಈ ಬಾರಿ ಕೊನೆಯ ಬಾರಿ ವೇಷ ಹಾಕುತ್ತೇನೆ ಎಂಬ ಆಶಾ ಭಾವನೆಯಿಂದ ಈ ಬಾರಿ’ಮರ್ಮೈಡ್’ ಅಂದರೆ ಮತ್ತ್ವಕ, ವೇಷ ಧರಿಸಿ ಉಡುಪಿಯಲ್ಲಿ ಸೆ. 4 ಮತ್ತು 5ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ, ಕಟಪಾಡಿ, ಬ್ರಹ್ಮಾವರ, ಮಲ್ಪೆ ಪರಿಸರದಲ್ಲಿ ತಂಡದೊಂದಿಗೆ ರೋಡ್ ಶೋ ನಡೆಸಲಿದ್ದಾರೆ.

ಪ್ರಸಾದ್ ರೇಖಾ ದಂಪತಿಯ ಮನೆಯಲ್ಲಿ ವೇಷಕ್ಕಾಗಿ ತಯಾರಿ ಪ್ರಾರಂಭಿಸಿ ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ತಮ್ಮ ಆ ನಿಮಿತ್ತ ಗುರುವಾರ ರಾತ್ರಿಯಿಂದ ಕಟಪಾಡಿ ಮಟ್ಟುವಿನ ಅಂಬಾಡಿ ತಂಡದ ಸುಮಾರು 80ಕ್ಕೂ ಅಧಿಕ ಸ್ವಯಂಸೇವಕರೊಂದಿಗೆ ಹೊರಟ್ಟಿದ್ದಾರೆ.

ಕಟಪಾಡಿ ಪೇಟೆಬೆಟ್ಟು ಶ್ರೀಬಬ್ಬುಸ್ವಾಮಿ, ಕೊರಗಜ್ಜ ಸನ್ನದಾನದಲ್ಲಿ ಪ್ರಾರ್ಥಿಸಿ ತಮ್ಮ ಸಮಾಜ ಸೇವೆಯ ಕಾರ್ಯ ಆರಂಭಿಸಿದ್ದಾರೆ.ಈ ಬಾರಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಸುಮಾರು 6 ಮಕ್ಕಳಿಗೆ ಚಿಕಿತ್ಸೆಗೆ ಸುಮಾರು 15 ಲಕ್ಷ ರೂ. ಸಂಗ್ರಹಿಸಿ ನೀಡುವ ಗುರಿ ಹೊಂದಿದ್ದಾರೆ.ಸಿದ್ದಿ ವಿನಾಯಕ ಆರ್ಟ್ ಕಾಪು ಇದರ ತುಷಾರ್ ಅಂಚನ್ ನೇತೃತ್ವದಲ್ಲಿ 4 ಜನರ ತಂಡ ರವಿ ಕಟಪಾಡಿ ವೇಷದಲ್ಲಿ ಕಲಾಗಾರಿಕೆ ನೀಡಿದ್ದಾರೆ.ಈ ಸಂದರ್ಭ ರವಿ ಕಟಪಾಡಿ ತಂಡದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು

Related posts

ಉಡುಪಿ ತಾ. ಮಟ್ಟದ ಚದುರಂಗ ಪಂದ್ಯಾವಳಿ ಕು. ನಿಹಾರಿಕಾ ಜಿಲ್ಲಾಮಟ್ಟಕ್ಕೆ ಆಯ್ಕೆ ಉಡುಪಿ ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ನಿಹಾರಿಕಾ ;

Voiceoftulunadu

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

Voiceoftulunadu

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ” ನುವಾ” ವಜ್ರಾಭರಣ ಅನಾವರಣ: ವಜ್ರಾಭರಣ ಅನಾವರಣಗೊಳಿಸಿದ ರೂಪದರ್ಶಿಗಳಾದ ನಿಧಿ, ಅನುಷಾ, ನಿಹಾರಿಕಾ ಶೆಟ್ಟಿ, ಶ್ರಾವ್ಯ;

Voiceoftulunadu

Leave a Comment