September 5, 2026
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಕರ್ನಾಟಕ ಪ್ರವಾಸಿ ತಾಣಗಳಿಗೆ ಆಕಾಶ ಮಾರ್ಗದ ಸಂಪರ್ಕ :13 ಕೇಂದ್ರಗಳಲ್ಲಿ ಬೃಹತ್ ‘ಕೇಬಲ್ ಕಾರ್’ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್! ;

ವರದಿ /ಚಿತ್ರ :ರವಿರಾಜ್ ಕಾವೂರು

ಬೆಂಗಳೂರು : ರಾಜ್ಯದ ಪ್ರವಾಸಿ ತಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮೆಗಾ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ಬೆಟ್ಟ-ಗುಡ್ಡಗಳು ಹಾಗೂ ಜಲಪಾತಗಳ ಸೌಂದರ್ಯವನ್ನು ಆಕಾಶ ಮಾರ್ಗದಿಂದ ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ 13 ಪ್ರಮುಖ ತಾಣಗಳಲ್ಲಿ ಸುಸಜ್ಜಿತ ರೋಪ್‌ವೇ (Ropeway) ಕಲ್ಪಿಸಲು ಸರ್ಕಾರ ವೇಗವಾಗಿ ಹೆಜ್ಜೆ ಇಟ್ಟಿದೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು ಜುಲೈ 13, 2026 ರಂದು ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತ್ವರಿತ ಕಾಮಗಾರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿ ಬರಲಿದೆ ಈ ಹೊಸ ತಾಂತ್ರಿಕ ಸೌಲಭ್ಯ?

ಸರ್ಕಾರವು ಮೊದಲ ಹಂತದಲ್ಲಿ ಸಮೀಕ್ಷೆ ನಡೆಸಿ ರೋಪ್‌ವೇ ಸ್ಥಾಪನೆಗಾಗಿ ಗ್ರೀನ್ ಸಿಗ್ನಲ್ ನೀಡಿರುವ ಪ್ರಮುಖ13 ಪ್ರವಾಸಿ ತಾಣಗಳ ಅಧಿಕೃತ ಪಟ್ಟಿ :

ಮುಳ್ಳಯ್ಯನಗಿರಿ ಶಿಖರ (ಚಿಕ್ಕಮಗಳೂರು)

ಗೋಕಾಕ್ ಜಲಪಾತ (ಬೆಳಗಾವಿ)

ಸವದತ್ತಿ ಯಲ್ಲಮ್ಮನ ಗುಡ್ಡ (ಬೆಳಗಾವಿ)

ಅಂಜನಾದ್ರಿ ಬೆಟ್ಟ (ಕೊಪ್ಪಳ)

ಮಧುಗಿರಿ ಕೋಟೆ (ತುಮಕೂರು)

ಮಲ್ಲಳ್ಳಿ ಜಲಪಾತ (ಕೊಡಗು)

ಬಳ್ಳಾರಿ ಕೋಟೆ (ಬಳ್ಳಾರಿ)

ನೃಪತುಂಗ ಬೆಟ್ಟ (ಧಾರವಾಡ)

ಯಾದಗಿರಿ ಕೋಟೆ (ಯಾದಗಿರಿ)

ಮೈಲಾರ ಲಿಂಗೇಶ್ವರ ದೇವಸ್ಥಾನ (ಯಾದಗಿರಿ)

ಹೊಳಲಮ್ಮ ದೇವಸ್ಥಾನ (ಗದಗ)

ಕಾಲಕಾಲೇಶ್ವರ ದೇವಸ್ಥಾನ (ಗದಗ)

ದೇವರಗುಡ್ಡ ಮಾಲತೇಶ ದೇವಸ್ಥಾನ (ಹಾವೇರಿ).

Related posts

ಮುದರಂಗಡಿ ಜನನಿ ಮಹಾಸಂಘದ ಆಯೋಜನೆಯಲ್ಲಿ ಅಪ್ಪಂದಿರ ದಿನ ಆಚರಣೆ : ಮೂವರು ಹಿರಿಯರಿಗೆ ಪೇಟ ತೊಡಿಸಿ, ಗೌರವ ಸಲ್ಲಿಸಿ ಅಪ್ಪಂದಿರ ದಿನ ಆಚರಣೆ;

Voiceoftulunadu

ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಸ್ವಾತಂತ್ರ್ಯ ದಿನಾಚರಣೆ, ಆಟಿ ಡೊಂಜಿ ವಿಪ್ರಕೂಟ, ವಿಪ್ರ ಯೋಧರಿಗೆ ಸನ್ಮಾನ:ಕನ್ನಡ ಪಾಡಿಯ ಶ್ರೀದೇವಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu

ಮನಪಾ ನಿರ್ಲಕ್ಷ್ಯ: ಕಾವೂರು-ಜ್ಯೋತಿನಗರ ಬಸ್ ನಿಲ್ದಾಣ, “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ ಸಾರ್ವಜನಿಕರ ಕರೆಗೆ ಒಗ್ಗಟ್ಟಾದ “ಮೀಡಿಯಾ ಮನಸುಗಳು” ;

Voiceoftulunadu

Leave a Comment