28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ : ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ನಡೆದ ಮುಹೂರ್ತ ಕಾರ್ಯಕ್ರಮ;

ವರದಿ /ಚಿತ್ರ :ಈ ಮೀಡಿಯಾ

ಕಾಪು: ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ಬುಧವಾರ ದಿ. ಲೀಲಾಧರ ಶೆಟ್ಟಿಯವರ ಸಾರಥ್ಯದ ಕಾಪುವಿನ ಖ್ಯಾತ ನಾಟಕ ಸಂಸ್ಥೆ “ರಂಗ ತರಂಗ” ದ 19 ನೇ ಸಾಮಾಜಿಕ, ಹಾಸ್ಯಮಯ “ವಿಕ್ರಂ ವೇದ” ನೂತನ ನಾಟಕಕ್ಕೆ ಮುಹೂರ್ತ ನೆರವೇರಿತು.ದೇವಳದ ಪ್ರಧಾನ ಅರ್ಚಕ ಜನಾರ್ಧನ ಭಟ್ ರವರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ದೀಪ ಬೆಳಗಿಸಿ ರಂಗ ತಂಡಕ್ಕೆ ಶುಭಹಾರೈಸಿದರು.ಈ ಸಂದರ್ಭ ಅವರು ಮಾತನಾಡಿ, ರಂಗ ತರಂಗ ಸಂಸ್ಥೆಯ ಹಿಂದಿನ 18 ನಾಟಕಗಳ ಮುಹೂರ್ತದಲ್ಲಿಯೂ ನಾನು ಭಾಗವಹಿಸಿದ್ದು, ಈಗ 19 ನಾಟಕದ ಮುಹೂರ್ತದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಹಿಂದಿನ ಎಲ್ಲಾ ನಾಟಕಗಳಂತೆ “ವಿಕ್ರಂ Seವೇದ” ನಾಟಕವೂ ಯಶ ಕಾಣಲಿ ಎಂದು ಹಾರೈಸಿದರು.

ಸಂಸ್ಥೆಯ ಮುಖ್ಯಸ್ಥರಾದ ಶರತ್ ಉಚ್ಚಿಲ ಮಾತನಾಡಿ, යි. ಕೆ. ಲೀಲಾಧರ ಶೆಟ್ಟಿಯವರ ಸಾರಥ್ಯದಲ್ಲಿ 19 ನೇ ನಾಟಕಕ್ಕೆ ಇಂದು ಮುಹೂರ್ತ ನೆರವೇರಿಸಿದ್ದೇವೆ. ಗಂಡ ಹೆಂಡತಿ ನಡುವಿನ ಪ್ರೇಮ, ವಿರಸ ಮತ್ತು ವಿಚ್ಛೇದನದ ಬಗ್ಗೆ ಉತ್ತಮ ಕಥಾ ಹಂದರದ ನಾಟಕ ಇದಾಗಿದ್ದು, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.ಸಂಸ್ಥೆಯ ರುವಾರಿ ಪ್ರಸನ್ನ ಶೆಟ್ಟಿ ಬೈಲೂರು ಮಾತನಾಡಿ, “ವಿಕ್ರಂ ವೇದ” ನಾಟಕವು ಅಗಸ್ಟ್ ತಿಂಗಳಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ಹಿಂದಿನ ನಾಟಕದಂತೆ ಈ ನಾಟಕಕ್ಕೂ ಸರ್ವರ ಸಹಕಾರ ಅಗತ್ಯ ಎಂದರು.

ಈ ಸಂದರ್ಭ ಶ್ರೀಕರ ಶೆಟ್ಟಿ ಕಲ್ಯ, ನಯೇಶ್ ಶೆಟ್ಟಿ ಎಲ್ಲೂರು, ಕಾಪುಪುರಸಭಾ ಸದಸ್ಯ ಅನಿಲ್ ಕುಮಾರ್ ಕಾಪು, ರವೀಂದ್ರ ಮಲ್ಲಾರು, ಮಾಧವ ಪಾಲನ್, ಉದಯ ಶೆಟ್ಟಿ, ಬಾಲಾಜಿ ಯೋಗೀಶ್ ಶೆಟ್ಟಿ, ರವಿ ಮಂದಾರ, ಸ್ವರ್ಣ ಸುಂದರ್, ನಾರಾಯಣ ಶೆಟ್ಟಿ ಕೊಪ್ಪಲಂಗಡಿ, ರಘುರಾಮ ಶೆಟ್ಟಿ ಕಾಪು, ದಿವಾಕರ ಶೆಟ್ಟಿ ಪೊಲ್ಯ, ಸರ್ವೋತ್ತಮ ಕುಂದರ್, ವಿಶ್ವನಾಥ್ ಕಾಪು, ಸುರೇಶ್ ಪ್ರಭು, ಕಲಾವಿರುಗಳಾದ ಶಿವಪ್ರಸಾದ್ ಪೂಂಜಾ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರಘುರಾಜ್ ಪಣಿಯಾಡಿ, ಶ್ರೀನಿವಾಸ ಆಚಾರ್ಯ ಉಚ್ಚಿಲ, ರಾಜೇಶ್ ಅಳಪೆ, ಪ್ರವೀಣ್ ಕೊಡಕ್ಕಲ್, ಯಶವಂತ್ ಉಳ್ಳೂರು, ದೀಪಕ್ ಮಳಲಿ, ಹರೀಶ್ ಕೋಟ್ಯಾನ್, ಕಾಪು, ಮಮತಾ, ಭವ್ಯ, ಪವಿತ್ರಾ, ನವ್ಯ, ಸುರೇಶ್ ಪಣಿಯೂರು, ಮಧುಕರ್ ಕೊಪ್ಪಲಂಗಡಿ, ಹಾಗೂ ರಂಗತರಂಗ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.

Related posts

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ : “ಏಕ್ ಫೆಡ್ ಮಾ ಕೆ ನಾಮ್” ಕಾರ್ಯಕ್ರಮಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ ;

Voiceoftulunadu

ರಾಜ್ಯದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ:ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಸಚಿವ ಯು.ಟಿ. ಖಾದರ್ ನೇಮಕ;

Voiceoftulunadu

ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ;

Voiceoftulunadu

Leave a Comment