September 6, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಫರಂಗಿಪೇಟೆ :ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ. ಸಮಾಜ ಸೇವೆ ಮನುಷ್ಯನ ಆಂತರ್ಯ ದಲ್ಲಿರುವ ಒಳ್ಳೆಯ ಗುಣ : ಪ್ರಕಾಶ್ ಕಾರಂತ್;

ಬಂಟ್ವಾಳ: ಸಮಾಜ ಸೇವೆ ಮನುಷ್ಯನ ಆಂತರ್ಯದಲ್ಲಿರುವ ಒಳ್ಳೆಯ ಗುಣ.‌ ಕೃಷ್ಣ ಕುಮಾರ್ ಪೂಂಜ ಅವರ ಮೂಲಕ ಸೇವಾಂಜಲಿ ಸಂಸ್ಥೆಯ ಸೇವಾ ಕಾರ್ಯದ ಪ್ರಯೋಜನ ಈ ಭಾಗದ ಜನರಿಗೆ ಸಿಗುತ್ತಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಿಸಿ ಮಾತನಾಡಿದರು. ಇಂದು ನೆರವು ಪಡೆಯುತ್ತಿರುವ ರೋಗಿಗಳು ರೋಗ ಗುಣಮುಖರಾದ ಬಳಿಕವೂ ಸೇವಾಂಜಲಿಯತ್ತ ಹಿಂದಿರುಗಿ ನೋಡುವ ಕಾರ್ಯ ಆಗಬೇಕಿದೆ. ನಾವು ಸಾಗಿ ಬಂದ ಹಾದಿಯ ಗುರುತನ್ನು ನೆನೆಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗಿಗಳಿಗೆ ಆಹಾರದಕಿಟ್ ನೀಡುವ ಮಹೋನ್ನತ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ.‌ ಇದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ತಿಳಿಸಿದರು.ಸದಾನಂದ ಆಳ್ವ ಅರ್ಕುಳ ಕಂಪ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಿರೀಶ್ ಪದೆಂಜಾರ್, ಟ್ರಸ್ಟಿ ನಾರಾಯಣ ಬಡ್ಡೂರು ಉಪಸ್ಥಿತರಿದ್ದರು.ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಠಿಕಾಂಶದ ಆಹಾರವನ್ನು ದಾನಿಗಳ ಸಹಕಾರದಿಂದ ನೀಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.ಪ್ರಶಾಂತ್ ತುಂಬೆ, ಗಾಯತ್ರಿ, ಸಾರಮ್ಮ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

Related posts

ಕೃತಕ ಬುದ್ಧಿ ಮತ್ತೆ ಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ;

Voiceoftulunadu

ರಾಜಕೀಯದ ಪುಣ್ಯಕೋಟಿ ಸಿದ್ದರಾಮಯ್ಯ: ಹೈಕಮಾಂಡ್‌ಗೆ ಕೊಟ್ಟ ಮಾತು ಉಳಿಸಿಕೊಂಡು ಸಿಎಂ ಗದ್ದುಗೆ ತ್ಯಜಿಸಿದ ಸಿದ್ದುವಿಶೇಷ ವರದಿ

Voiceoftulunadu

ಅರಮನೆಗಳ ನಗರ’ ಮೈಸೂರಿನ ಬದಲಾಗುತ್ತಿರುವ ಮೂಲಸೌಕರ್ಯ ಹಾಗೂ ‘ಪ್ರಕೃತಿಯ ಸ್ವರ್ಗದ’ ಮೇಲೆ ಅದರ ಪರಿಣಾಮ;

Voiceoftulunadu

Leave a Comment