September 6, 2026
Uncategorizedಕಲೆ/ಸಾಹಿತ್ಯರಾಜ್ಯ/ದೇಶವಾಣಿಜ್ಯ/ಉದ್ಯಮಸಿನಿಮಾ/ಮನರಂಜನೆ

ರಾಷ್ಟ್ರೀಯ ಸಿನಿಮಾ ಪುರಸ್ಕಾರ,ಕನ್ನಡಕ್ಕೆ 4, ತುಳುಗೆ 1 ಗೌರವಕನ್ನಡಕ್ಕೆ ಮೊದಲ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ,ಮಿಥ್ಯ ಚಿತ್ರಕ್ಕೆ ರೂಪಶ್ರೀಗೆ ಅತ್ಯುತ್ತಮ ಪೋಷಕ ನಟಿ ಗೌರವ , ಆತಿಶ್ ಶೆಟ್ಟಿ ಅತ್ಯುತ್ತಮ ಬಾಲ ನಟಮಿಥ್ಯ ಅತ್ಯುತ್ತಮ ಚಿತ್ರ ,ಉತ್ತಮ ಪುಸ್ತಕ: ಕೆಂಜಾರು ಪ್ರದೀಪ್ ಶೆಟ್ಟಿ ,ಉತ್ತಮ ತುಳು ಚಿತ್ರ ಇಂಬು ;

ನವದೆಹಲಿ/ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೀಯಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂ ಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ ‘ಮಿಥ್ಯ’ ಸಿನಿಮಾದ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯು ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ,

2024ರಲ್ಲಿ ತೆರೆಕಂಡ, ಅನಾಥ ಬಾಲಕನ ನೋವಿನ ಕತೆ ತೆರೆದಿಟ್ಟ ಕನ್ನಡದ ‘ಮಿಥ್ಯ’ ಸಿನಿಮಾಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ಕೆಂಚನೂರು ಪ್ರದೀಪ್ ಕುಮಾರ್ ‘ ಶೆಟ್ಟಿ ಅವರ ‘ನಾನಿರುವುದೆ ನಿಮಗಾಗಿ ನಾಡಿರು ವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ.

ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ’ ಆರ್ಟಿಕಲ್ 370′ ಅತ್ಯುತ್ತಮ ಚಿತ್ರ ರಾಜ್‌ಕುಮಾರ್ ಶ್ರೇಷ್ಠ ನಿರ್ದೇಶಕ:

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ (ಬ್ರಹ್ಮಯುಗಂ) ಹಾಗೂ ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್ (ಆರ್ಟಿಕಲ್ 370) ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಆರ್ಟಿಕಲ್ 370’ಗೆ ಅತ್ಯುತ್ತಮ ಚಲನಚಿತ್ರ ಹಾಗೂ ತಮಿಳು ಚಿತ್ರ ‘ಆಮರನ್’ಗಾಗಿ ರಾಜ್‌ ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Related posts

ಶ್ರೀವಿದ್ಯಾ ತಂತ್ರ ಸಾರ; ‘ಮೈಂಡ್ ಮೆಕ್ಯಾನಿಸಂ’ ಪ್ರಸ್ತುತ ಪಡಿಸುವ, ಶ್ರೀ ವಿದ್ಯಾ ತಂತ್ರ ಸಾರ | ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಲಲಿತಾ ತ್ರಿಪುರ ಸುಂದರಿ ಸಹಸ್ರನಾಮ ಪ್ರಯೋಗ :

voiceoftulunadu

ಫಾದರ್ ಮುಲ್ಲ‌ರ್ ಸಂಸ್ಥೆಯ ಪ್ರತಿಷ್ಠಿತ ‘ಡಾ|ಸಂಜೀವ್ ರೈ ಅತ್ಯುತ್ತಮ ಸಂಶೋಧಕ’ ಪ್ರಶಸ್ತಿ ಮುಡಿಗೇರಿಸಿಕೊಂಡ ರೆನೋಯ್ ಆಂಟನಿ ಒಲಿವೆರಾ

Voiceoftulunadu

ಹೈಟೆಕ್ ರೂಪ ಪಡೆದು ಉದ್ಘಾಟನೆಗೆ ಸಿದ್ದಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣ. ಅಮೃತ ಭಾರತ್ ಸ್ಟೇಷನ್’ ಯೋಜನೆಯಡಿ ರೂ 26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ;

Voiceoftulunadu

Leave a Comment