ವರದಿ /ಚಿತ್ರ: ದಿತೇಶ್ ಪೂಜಾರಿ ಮಂಗಳೂರು
ಮಂಗಳೂರು: ಪದವಿನಂಗಡಿ ಬೊಲ್ಪುಗುಡ್ಡೆ ಶ್ರೀ ಸಾಯಿ ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಮಂಡಳಿ ಎರಡನೇ ವರ್ಷದ “ಆಟಿಡೊಂಜಿ ದಿನ’ ಕಾರ್ಯ ಕ್ರಮ ಊರಿನ ಪ್ರಮುಖರಾದ ಮೋಹಿನಿ ಶೆಟ್ಟಿಗಾರ್ರವರ ಮನೆಯಲ್ಲಿ ನಡೆಯಿತು.
ಬೊಲ್ಪುಗುಡ್ಡೆ ಶ್ರೀ ಚಂಡಿ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಮೊಕ್ತಸರ ಬಿ.ಚಂದ್ರಶೇಖರ್ ಉದ್ಘಾಟಿಸಿದರು.ಪಲ್ಗುಣಿ ಕನ್ಸ್ಟಕ್ಷನ್ ಮಾಲಕ ಶೇಖರ್ ಪೂಜಾರಿ, ಕಟೀಲೇಶ್ವರಿ ಶಾಮಿಯಾನದ ಮಾಲಕ ನಿಶಿತ್ ಪೂಜಾರಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಆಶಾ ಮೊದಲಾದವರು ಉಪ ಸ್ಥಿತರಿದ್ದರು.
ಈ ಸಂದರ್ಭ ಗೃಹಜ್ಯೋತಿ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಿದ ಸ್ಮಿತಾ ಶರತ್ ಅವರನ್ನು ಸನ್ಮಾನಿಸಲಾಯಿತು. ದೇವಿಕಾ ಸ್ವಾಗತಿಸಿದರು. ಭವಾನಿ ವಂದಿಸಿದರು.
