27 C
ಮಂಗಳೂರು
July 6, 2026
Uncategorizedಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಶೇಷ ಅಂಕಣಸಿನಿಮಾ

ಸೊನಾಟಾ ಸಿಂಫನೀಸ್-ಎನ್‌ಕೆಇಎಸ್ ಸಂಯುಕ್ತ ಆಶ್ರಯದಲ್ಲಿ ಗೋಕುಲ್ ಸಭಾಗೃಹದಲ್ಲಿ ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ೮೦ನೇ ಜನ್ಮದಿನ ಸಂಭ್ರಮ:

ವರದಿ /ಚಿತ್ರ : ರೋನ್ಸ್ ಬಂಟ್ವಾಳ

ಮುಂಬಯಿ, ಜೂ.12: ಸೊನಾಟಾ ಸಿಂಫನೀಸ್ ಹಾಗೂ ಎನ್‌ಕೆಇಎಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಗುರುವಾರ (ಜೂ.04) ಸಯನ್‌ನ ಗೋಕುಲ್ ಸಭಾಗೃಹದಲ್ಲಿ ಸಂಗೀತದ ಗಾನಗಂಧರ್ವ ದಿ| ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ೮೦ನೇ ಜನ್ಮದಿನವನ್ನು ವಿನೂತನವಾಗಿ ಆಚರಿಸಲಾಯಿತು.ವಿಶ್ವನಾಥ್ ಶೆಟ್ಟಿ ಕಾಪು ಅವರ ಮುತುವರ್ಜಿಯಲ್ಲಿ ಹಾಗೂ ಎನ್‌ಕೆಇಎಸ್ ಹಳೆ ವಿದ್ಯಾಥಿಗಳ ನೇತೃತ್ವದಲ್ಲಿ ಉಚಿತವಾಗಿ ಆಯೋಜಿಸಲಾಗಿದ್ದ ಸಂಗೀತ ಸಂಜೆಯಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಆರಂಭದಲ್ಲಿ ತಂಡದ ಹಾಡುಗಾರರು ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ, ಎಸ್‌ಪಿಬಿ ಅವರಿಗಾಗಿ ವಿಶೇಷವಾಗಿ ತಯಾರಿಸಲಾದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಸಂಭ್ರಮಿಸಿದರು.ಸ್ವರ ಸೂರಿ ಮಾರ್ನಾಡ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಂಗೀತ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಅವರು ಹಾಡಿದ ಅಮರ ಗೀತೆಗಳನ್ನು ಆಯ್ದು ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಲಾಯಿತು.ಗಾಯಕರಾದ ವಿಶ್ವನಾಥ್ ಶೆಟ್ಟಿ ಕಾಪು, ಸುರೇಶ್ ಶೆಟ್ಟಿ, ಜಯೇಶ್ ಪೂಜಾರಿ, ಕೇಶವ್ ಶೆಟ್ಟಿ ಕಲ್ಲಡ್ಕ, ಸಂಧ್ಯಾ ಸಿಂಗ್, ಪ್ರತಿಮಾ ಆಚಾರ್ಯ, ಬೇಬಿ ಸ್ವರ ಮಾರ್ನಾಡ್, ಮೀನಾಶ್ವಿ ಚೌಬೆ ಹಾಗೂ ನಮ್ರತಾ ಕದಂ ಅವರು ಮನಮೋಹಕವಾಗಿ ಹಾಡುಗಳನ್ನು ಪ್ರಸ್ತುತಪಡಿಸಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮಹಾನೀಯರನ್ನು ವೇದಿಕೆಗೆ ಆಹ್ವಾನಿಸಿ ಸತ್ಕಾರಿಸಲಾಯಿತು. ಬೃಹನ್ಮುಂಬಯಿಯಲ್ಲಿ ಇದೇ ಮೊದಲಾಗಿಸಿ ಹೊಸ ಮಾದರಿಯ ಸಂಗೀತ ಕಾರ್ಯಕ್ರಮದೊಂದಿಗೆ ಹೊಸ ಆಯಾಮ ನೀಡಿದ ಈ ತಂಡದ ಪ್ರಯತ್ನ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಗಿ ವಿಶಿಷ್ಟ ಸಂಚಲನ ಮೂಡಿಸಿತು. ಶಾಹಿದ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ಡಾ. ಜಿ.ಪರಮೇಶ್ವರ್ ಅವರು ತಮ್ಮ ವ್ಯಕ್ತಿತ್ವದಿಂದ ಶ್ರೀಮಂತರು : ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ;

Voiceoftulunadu

ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ; ಕುಂದು ಕೊರತೆಯ ಬಗ್ಗೆ ಮೀನುಗಾರ ಮಹಿಳೆಯರೊಂದಿಗೆ ಚರ್ಚೆ:

Voiceoftulunadu

ಅಹಮದಾಬಾದ್-ಮಂಗಳೂರು ಜಂಕ್ಷನ್-ಅಹಮದಾಬಾದ್ ರೈಲುಯಾನ‘ವೀಕ್ಲಿ ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ರೈಲು ಸಂಚಾರ ಅವಧಿ ವಿಸ್ತಾರ;

Voiceoftulunadu

Leave a Comment