September 6, 2026
Uncategorizedಕ್ರೈಮ್/ಅವಘಡಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಡುಪಿ ಜನ್ಮಾಷ್ಟಮಿ ಸಂಭ್ರಮ ಭಕ್ತಿ, ಶ್ರದ್ದೆಯ ಕೃಷ್ಣಾಷ್ಠಮಿ: ಪರ್ಯಾಯ ಶಿರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅರ್ತ್ಯ ಪ್ರಧಾನ ;

ವರದಿ /ಚಿತ್ರ: ಈ ಮೀಡಿಯಾ

ಕನ್ನಡಉಡುಪಿ : ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಮೇರೆ ಮೀರಿದ್ದು, ಸಿಂಹ ಮಾಸ ಕೃಷ್ಣ ಪಕ್ಷ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದ ಶುಭಗಳಿಗೆಯಲ್ಲಿ ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಶ್ರೀಕೃಷ್ಣನಿಗೆ ಶುಕ್ರವಾರ ರಾತ್ರಿ ಭಕ್ತಿ, ಶ್ರದ್ದೆಯಿಂದ ಅರ್ಥ್ಯ ಪ್ರದಾನ ನೆರವೇರಿತು.

ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ರಾತ್ರಿ ಮಹಾಪೂಜೆ ಬಳಿಕ ರಾತ್ರಿ 12.15ರ ಚಂದ್ರೋದಯ ಕಾಲದಲ್ಲಿ ಪೂಜೆ, ನವ ಬಗೆಯ ಉಂಡೆ ಚಕ್ಕುಲಿ ಸಹಿತ ನೈವೇದ್ಯ ಅರ್ಪಿಸಿದರು.

ಸಮಸ್ತ ಲೋಕಕ್ಕೆ ಒಳಿತು ಮಾಡುವಂತೆ ಪ್ರಾರ್ಥಿಸಿ ಅರ್ತ್ಯ ನೀಡಿದರು.ತೀರ್ಥಮಂಟಪದ ಅಲಂಕೃತ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಕ್ಷೀರಾರ್ಥ್ಯ ತೆಂಗಿನ ಕಾಯಿ ಹೋಳಿನಲ್ಲಿ ಸಮರ್ಪಿಸಲಾಯಿತು. ಯತಿಗಳು, ಭಕ್ತರು ದಿನವಿಡೀ ನಿರ್ಜಲ ಉಪವಾಸ ಕೈಗೊಂಡಿದ್ದು, ಮಿಂದು ಸರತಿಯಲ್ಲಿ ಬಂದು ಶ್ರೀಕೃಷ್ಣನಿಗೆ ಭಕ್ತಿ, ಶ್ರದ್ದೆಯಿಂದ ಅರ್ತ್ಯ ಪ್ರದಾನಿಸಿದರು.

ಜಗದೊಡೆಯನ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಶುಕ್ರವಾರ ಮಹಾಪೂಜೆ ನಡೆಯಿತು.

Related posts

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ : ಕಾರ್ಯಕ್ರಮ ಉದ್ಘಾಟಿಸಿದ ಉಭಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ;

Voiceoftulunadu

ಆದಿಉಡುಪಿಯಲ್ಲಿ ಎಂ.ಜಿ. ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮ್ ಉದ್ಘಾಟನೆ : ಧರ್ಮದರ್ಶಿ ರಮಾನಂದ ಗುರೂಜಿ ದೀಪ ಬೆಳಗಿಸಿ ಉದ್ಘಾಟನೆ;

Voiceoftulunadu

ನೇತ್ರಾವತಿ ಜಲಾನಯನ ಪ್ರದೇಶದ ಕೃಷಿ ಹಳ್ಳದಲ್ಲಿ ಜಲನಾಯಿಗಳ ಹಿಂಡು ಪತ್ತೆ;

Voiceoftulunadu

Leave a Comment