September 5, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ ;

ವರದಿ /ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ಪೊಳಲಿ ಇದರ ವಾರ್ಷಿಕ ಮಹಾಸಭೆಯು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ ಇವರ ಅದ್ಯಕ್ಷತೆಯಲ್ಲಿ ಆ 30ರಂದು ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಕೃಷಿ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಡಿ ಎ ಅಬೂಬಕ್ಕರ್ ಅಮುಂಜೆ, ನಾಟಿ ವೈದ್ಯರಾದ ಚೆನ್ನಪ್ಪ ಪೂಜಾರಿ ಬಡಕಬೈಲು, ಈಶ್ವರ ಪೂಜಾರಿ ಕಲಾಯಿ ಇವರನ್ನು ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರಮಕ್ಕಳನ್ನು ಗೌರವನಿಧಿಯೊಂದಿಗೆ ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಡಿ ಎ ಅಬೂಬಕ್ಕರ್, ಕರುಣಾಕರ ಆಳ್ವ, ಸುಕೇಶ್ ಚೌಟ, ಯಶವಂತ ಪೂಜಾರಿ, ಲಕ್ಷ್ಮೀಶ ಶೆಟ್ಟಿ, ನಿರಂಜಿನಿ ಸಿ ಶೆಟ್ಟಿ, ಜಯಂತಿ,ಗೊಡ್ಫ್ರಿ ಫೆರ್ನಾಂಡಿಸ್,ಕರಿಯದ ಹಾಗೂ ವಲಯ ಮೇಲ್ವಿಚಾರಕ ಕೀರ್ತಿರಾಜ್, ಸಿಬಂದಿಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಾಹಣಾಧಿಕಾರಿ ವಿಜಯ ರವಿ ಫೆರ್ನಾಂಡಿಸ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು, ಉಪಾಧ್ಯಕ್ಷ ಗೋಪಾಲ ಅಂಚನ್ ಬಡಕಬೈಲು ಧನ್ಯವಾದವಿತ್ತರು.

Related posts

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಬಹರೈನ್ ಘಟಕದ ಅಧ್ಯಕ್ಷರಾಗಿ ಕಮಲಾಕ್ಷ ಅಮೀನ್ ನೇಮಕ;

Voiceoftulunadu

ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಅವರಿಗೆ ವೇದವಿಭೂಷಣ ಪ್ರಶಸ್ತಿ ಪ್ರದಾನ : ಧಾರ್ಮಿಕ ನಂಬಿಕೆಯಿಂದ ಜೀವನ ಪಾವನ : ಚಂದ್ರಶೇಖರ ಸ್ವಾಮೀಜಿ;

Voiceoftulunadu

ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆಲ್ಲಿ ಇಂಟರಾಕ್ಷ ಪದಗ್ರಹಣ ಸಮಾರಂಭ : ರೂರಲ್ ಎಜುಕೇಶನ್ ಸೊಸೈಟಿ ಆಶ್ರಿತ ವಿದ್ಯಾ ಸಂಸ್ಥೆ;

Voiceoftulunadu

Leave a Comment