ವರದಿ /ಚಿತ್ರ:ಸಂತೋಷ್ ಸಜಿಪ
ಕ್ಷೇತ್ರದಲ್ಲಿ ಜುಲಾಯಿ 12 ರಿಂದ ಆಗಸ್ಟ್ 28 ರವರೆಗೆ 48 ದಿನಗಳ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದ್ದು ಇದರ ಅಂಗವಾಗಿ ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಪೂಜ್ಯ ಶ್ರೀಗಳು ದೀಪ ಪ್ರಜ್ಜಲನೆ ಮಾಡಿ ಆರ್ಶಿವಚನ ನೀಡಿದರು.ಸಮಾರಂಭದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಅಧ್ಯಕ್ಷ ಡಾ.ಹರೀಶ್ ಬೊಟ್ಟಾರಿ ಚೇವಾರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ
ಮುಖ್ಯ ಅತಿಥಿಯಾಗಿ ಶ್ರೀ ಗಳಾದ ಗೋಪಲಕೃಷ್ಣ ಪೈ ಬದಿಯಡ್ಕ, ,ಶ್ರೀ ಸತೀಶ್ವಂದ್ರ ಭಂಡಾರಿ ಕೋಳಾರು,ಶ್ರೀ ಅಮರನಾಥ ಅಜಿಲ, ಶ್ರೀ ಹರಿಪ್ರಸಾದ್ ಶೆಟ್ಟಿ ಮಾಯಿಲೆಂಗಿ,ಶ್ರೀಧಾಮ ಮಹಿಳಾ ಸಮಿತಿ ಗೌರವಧ್ಯಕ್ಷೆ ಶ್ರೀ ಮತಿ ರೇವತಿ ಪೆರ್ನೆ, ಕಲ್ಯಾಟೆ ವೆಂಕಟರಮಣ ಭಟ್,ಟ್ರಸ್ಟಿಗಳಾದ ಶ್ರೀ ಚಂದ್ರಶೇಖರ್ ಮಂಗಳೂರು, ಧಾರ್ಮಿಕ ಪರಿಷತ್ ನ ಶ್ರೀ ದೇವಪ್ಪ ಕುಲಾಲ್ ಪಂಜಿಕಲ್ಲು ಉಪಸ್ಥಿತರಿದ್ದರು.

ಟ್ರಸ್ಟಿಗಳು ಶ್ರೀಧಾಮ ಸೇವಾ ಸಮಿತಿ, ಶ್ರೀಧಾಮ ಮಹಿಳಾ ಸಮಿತಿ, ಶ್ರೀಧಾಮ ಮಿತ್ರ ವೃಂದ ಹಾಗೂ ಭಕ್ತರು, ಹಿತೈಷಿಗಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ಧಾರ್ಮಿಕ ಮುಂದಾಳು ಕೈಯ್ಯೂರು ಶ್ರೀ ನಾರಾಯಣ ಭಟ್ ಸ್ವಾಗತಿಸಿ, ಟ್ರಸ್ಟಿ ದೇವಪ್ಪ ಕುಲಾಲ್ ವಂದಿಸಿದರು. ಹೆಚ್ ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.

