September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಳಲಗಿರಿ ಯುವ ವಿಚಾರ ವೇದಿಕೆ ಆಟಿಡೊಂಜಿ ದಿನಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳ ಸವಿರುಚಿ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಿಚಾರ ವೇದಿಕೆ ಕೊಳಲಗಿರಿ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು.ಹಿರಿಯರಾದ ಗಿರಿಜಾ ಆಚಾರ್ಯ ನರ್ನಾಡು, ಚಿನ್ನು ಕೊಳಲಗಿರಿ ಇವರು ಸಿದ್ದೆಯಿಂದ ಸೇರಿಗೆ, ಸೇರಿನಿಂದ ಕಳೆಸೆಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಳ್ಳೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಮೇಶ ಕರ್ಕೇರ, ಉಳ್ಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ, ಹಿರಿಯರಾದ ಮಾಧವ ಪಾಣ, ಶಕುಂತಲಾ ಸುಕೇಶ್ ಉಪಸ್ಥಿತರಿದ್ದರು.ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು.

ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ರವೀಂದ್ರಕುಮಾರ್, ಸುಕೇಶ್ ಪಾಣ, ಕೇಶವ್ ಪುಷ್ಪಲತಾ ನರ್ಸರಿ, ಶಿವಾನಂದ, ಶಶಿಕುಮಾರ್, ಹೇಮಂತ್, ವೈಭವ್, ಅವಿನಾಶ್, ಶಾಂತ ಸೆಲ್ವರಾಜ್, ಶೋಭಾ ಯೋಗೀಶ್, ಜಯಲಕ್ಷ್ಮೀ, ಸುಜಾತ ಟೀಚರ್, ಲಕ್ಷ್ಮೀ ಟೀಚರ್, ಸೌಮ್ಯ ಶೆಟ್ಟಿ, ಪ್ರಿಯಾಂಕಾ ಉಪಸ್ಥಿತರಿದ್ದರು.

ಸುಬ್ರಮಣ್ಯ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳನ್ನು ವೇದಿಕೆಯ ಸದಸ್ಯರು ತಯಾರಿಸಿ ತಂದು ಉಣ ಬಡಿಸಿದರು.ಕೃಷಿ ಪರಿಕರಗಳ ಜೊತೆಗೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವು ವಸ್ತುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಲಾಯಿತು.

Related posts

ವಿದ್ಯಾರ್ಥಿಗಳ ವಿರುದ್ಧದ ಕೇಸ್‌ ದೇಶಾದ್ಯಂತ ವಾಪಸ್‌; ವಿಶೇಷಾಧಿಕಾರ ಬಳಸಿ ಸುಪ್ರೀಂಕೋರ್ಟ್‌ ಆದೇಶ ;

Voiceoftulunadu

ಬಿ.ಸಿ.ರೋಡು: ಯುವ ಗಾಣಿಗ ಸಂಘ ದಿಂದ ‘ಕೆಸರ್ ಡ್ ಒಂಜಿ ದಿನ’, ಶಾಸಕ ಮೆಚ್ಚುಗೆ ;

Voiceoftulunadu

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಂದ ಬೆಳ್ತಂಗಡಿಯಲ್ಲಿನ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನಾ ಸಮಾರಂಭ:

Voiceoftulunadu

Leave a Comment