ವರದಿ ಚಿತ್ರ: ಈ ಮೀಡಿಯಾ
.
ಕಾಪು: ಹಿರಿಯ ಶಿಕ್ಷಕ, ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಕೃಷ್ಣಮೂರ್ತಿ ಭಟ್ ಅವರ ಸ್ಮರಣಾರ್ಥ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಭಜನಾ ಮಂಡಳಿಯ ವತಿಯಿಂದ ದೇವಸ್ಥಾನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿ ಉಪಾಧ್ಯಾಯ, ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ಗುರುರಾಜ್ ಭಟ್, ಗಣೇಶ್ ನಾಯ್ಕ್, ಶೈಲೇಂದ್ರ ಮಜೂರು, ಜನಾರ್ಧನ ಆಚಾರ್ಯ, ಅರ್ಚಕರಾದ ಲಕ್ಷ್ಮೀಶ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ತ್ರಿವಿಕ್ರಮ ಭಟ್, ಭಜನಾ ಮಂಡಳಿಯ ಅಧ್ಯಕ್ಷ ಸಂತೋಷ್ ಕಾಪು, ಪ್ರಮುಖರಾದ ಪದ್ಮನಾಭ ಶಾನಭಾಗ್, ಕರಂದಾಡಿ ರಮಾನಾಥ್ ರಾವ್ ಬೆಂಗಳೂರು, ದಿನೇಶ್ ಶೆಟ್ಟಿ ಕರಂದಾಡಿ, ಸುಬ್ರಹ್ಮಣ್ಯ ಐತಾಳ್,ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಗೋಪಾಲ ಕುಂದರ್, ನಾಗಭೂಷಣ್ ರಾವ್, ಪದಾಧಿಕಾರಿಗಳಾದ ಸುಧಾಕರ ಆಚಾರ್ಯ, ಮನೋಜ್ ನಾಯ್ಕ್ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
