September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ : ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ;

ವರದಿ /ಚಿತ್ರ: ಈ ಮೀಡಿಯಾ

ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿ ಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.

ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅದ್ಭುತವಾಗಿ ತಿಳಿಸಿ ಹೇಳಿದರು.

ಪ್ರದೀಪ್ ಆಚಾರ್ಯ, ರಾಜು ಹೆಜಮಾಡಿ, ಸದಾಶಿವ ಪಡುಬಿದ್ರಿ ಶುಭ ಹಾರೈಸಿದರು.ಮಂಜುನಾಥ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಉಮೇಶ್ ಬೊಗ್ಗರಿ ಲಚ್ಚಿಲ್, ರಾಮ್ ಪಲಿಮಾರು, ಕರಿಯ ಕೇರಿ, ನಿತೀನ್ ಸಾಲ್ಯಾನ್, ಪ್ರಕಾಶ್ ಮುಂಡೂರು, ಕು.ಅಶ್ವಿನಿ, ಕು. ಅರ್ಚನ ಉಪಸ್ಥಿತರಿದ್ದರು.

ಸುರೇಶ್ ಪಡುಬಿದ್ರಿ ಸ್ವಾಗತಿಸಿದರು. ಶ್ರೀಧ‌ರ್ ವಂದಿಸಿದರು, ಪ್ರಸನ್ನ ಪಡುಬಿದ್ರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

Related posts

ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ; ಚಿನ್ನಯ್ಯನಿಂದ ರಿಟ್ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಕಾಶ್ ರಾಜ್ ಹೆಸರು:

voiceoftulunadu

ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿಯಾಗಿ ಈಥನ್ ರಫಾಯೆಲ್ ತೌರೊ ನೇಮಕ

Voiceoftulunadu

ಬಂಟಕಲ್ಲು ದುರ್ಗಾಪರಮೇಶ್ವರಿ ದೇಗುಲದ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ ಮಂಜೂರಾತಿ ಪತ್ರ ಹಸ್ತಾಂತರಿಸಿದ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ;

Voiceoftulunadu

Leave a Comment