ವರದಿ /ಚಿತ್ರ: ಈ ಮೀಡಿಯಾ
ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿ ಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.
ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅದ್ಭುತವಾಗಿ ತಿಳಿಸಿ ಹೇಳಿದರು.
ಪ್ರದೀಪ್ ಆಚಾರ್ಯ, ರಾಜು ಹೆಜಮಾಡಿ, ಸದಾಶಿವ ಪಡುಬಿದ್ರಿ ಶುಭ ಹಾರೈಸಿದರು.ಮಂಜುನಾಥ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಮೇಶ್ ಬೊಗ್ಗರಿ ಲಚ್ಚಿಲ್, ರಾಮ್ ಪಲಿಮಾರು, ಕರಿಯ ಕೇರಿ, ನಿತೀನ್ ಸಾಲ್ಯಾನ್, ಪ್ರಕಾಶ್ ಮುಂಡೂರು, ಕು.ಅಶ್ವಿನಿ, ಕು. ಅರ್ಚನ ಉಪಸ್ಥಿತರಿದ್ದರು.
ಸುರೇಶ್ ಪಡುಬಿದ್ರಿ ಸ್ವಾಗತಿಸಿದರು. ಶ್ರೀಧರ್ ವಂದಿಸಿದರು, ಪ್ರಸನ್ನ ಪಡುಬಿದ್ರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.
